ಕನ್ನಡ ವಾರ್ತೆಗಳು

ಹಂಡೇಲು: ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ್ದ ಬಸ್ ಪಲ್ಟಿ .

Pinterest LinkedIn Tumblr

Bus_accdent_photo_1

ಮೂಡುಬಿದಿರೆ,ಮೇ.25 :  ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯ ಹಂಡೇಲುಸುತ್ತು, ಮೂಡುಬಿದಿರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಖಾಸಗಿ ಬಸ್ ಪಲ್ಟಿಯಾಗಿ ತೋಟಕ್ಕೆ ಬಿದ್ದಿದೆ.

Bus_accdent_photo_2 Bus_accdent_photo_3 Bus_accdent_photo_4 Bus_accdent_photo_5 Bus_accdent_photo_6 Bus_accdent_photo_7

ಮುಂಬೈ ರೂಟ್ನ ಕೆನಾರ ಪಿಂಟೋ ಖಾಸಗಿ ಬಸ್ ಸೋಮವಾರ ಮುಂಜಾನೆ ಮೂಡುಬಿದಿರೆಯಲ್ಲಿ ಪ್ರಯಾಣಿಕರನ್ನು ಇಳಿಸಿ, ಮಂಗಳೂರಿನ ಕಡೆಗೆ ತೆರಳುತಿದ್ದು, ತಿರುವು ಪ್ರದೇಶವಾಗಿರುವ ಹಂಡೇಲುಸುತ್ತು ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲೇ ಇದ್ದ ತೆಂಗು-ಕಂಗಿನ ತೋಟಕ್ಕೆ ಬಿದ್ದಿದೆ. ಘಟನೆ ವೇಳೆ ಬಸ್‍ನಲ್ಲಿ ಇಬ್ಬರು ಪ್ರಯಾಣಿಕರಿದ್ದು, ಯಾವುದೇ ರೀತಿಯ ಪ್ರಾಣಪಾಯವಾಗಿಲ್ಲ. ಬಸ್‍ನಲ್ಲಿದ್ದ ಮಹಿಳೆಯೊಬ್ಬರನ್ನು ರಕ್ಷಿಸುವಲ್ಲಿ ಸ್ಥಳೀಯರು ನೆರವಾದರು.

ಬಸ್ ಬೀಳುವ ರಭಸಕ್ಕೆ 2 ತೆಂಗಿನ ಮರಗಳು ತಕ್ಷಣ ಮುರಿದುಬಿದ್ದಿದೆ. ಮೂಡುಬಿದಿರೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು

Write A Comment