ಕನ್ನಡ ವಾರ್ತೆಗಳು

ಗುರುಕುಲ ಉತ್ಸವ -2015 ರ ಭರತನಾಟ್ಯ ಮತ್ತು ಜಾನಪದ ಸ್ಪರ್ಧೆಗೆ ಚಾಲನೆ.

Pinterest LinkedIn Tumblr

ullala_gurukula_dance

ಉಳ್ಳಾಲ, ಮೇ .25 : ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ನೃತ್ಯ ಶಿಕ್ಷಣ ಸಂಸ್ಥೆಯಿಂದ ಅಂಬಿಕಾರೋಡ್‌ನ ಗಟ್ಟಿ ಸಮಾಜ ಭವನದಲ್ಲಿ ಶನಿವಾರ ನಡೆದ ಗುರುಕುಲ ಉತ್ಸವ -೨೦೧೫ರ ಭರತನಾಟ್ಯ ಮತ್ತು ಜಾನಪದ ಸ್ಪರ್ಧೆಗೆ ಸಂಸ್ಥೆಯ ಅಧ್ಯಕ್ಷೆ ಶಕೀಲಾ ಜನಾರ್ಧನ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ ವಿದುಷಿ ಸೌಮ್ಯಾ ಸುಽಂದ್ರ ರಾವ್, ವಿದುಷಿ ಶ್ರುತಿ ಗುರುರಾಜ್, ಪ್ರತಿಭಾ ವಿಜಯಕುಮಾರ್, ಬಬಿತಾ ಸೂರಜ್, ಪೊಸಕುರಲ್‌ನ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಮಂತ್ರ ನಾಟ್ಯಕಲಾ ಗುರುಕುಲದ ನೃತ್ಯ ನಿರ್ದೇಶಕ ವಿದ್ವಾನ್ ಶ್ರಾವಣ್ ಉಳ್ಳಾಲ್, ಕಾರ್ಯದರ್ಶಿ ಕಿರಣ್ ಉಳ್ಳಾಲ್ ಉಪಸ್ಥಿತರಿದ್ದರು. ಧನಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.

Write A Comment