ಕನ್ನಡ ವಾರ್ತೆಗಳು

ಮೀರಾ ಡಹಾಣು ಬಂಟ್ಸ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

Pinterest LinkedIn Tumblr
Mumbai_news_photo_2
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್
 
ಮುಂಬಯಿ : ಮೀರಾ ಡಹಾಣು ಬಂಟ್ಸ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರವು ಮೇ 10 ರಂದು ವಸಾಯಿ ಮಾಣಿಕ್ ಪುರ ಆದಿವಾಸಿ ಗ್ರಾಮೀಣ ಪ್ರದೇಶದ ಬಡ ಜನರಿಗಾಗಿ ನಡೆಯಿತು. ಗೌ. ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಶಿಬಿರದಲ್ಲಿ 36 ವೈದ್ಯರ ತಂಡಗಳು ಭಾಗವಹಿಸಿ ಹಲವಾರು ರೋಗಗಳ ತಪಾಸಣೆ ನಡೆಸಿ ಉಚಿತ ಮದ್ದು ನೀಡಲಾಯಿತು.
 
ಈ ಕಾರ್ಯಕ್ರಮದ ಸಂಪೂರ್ಣ ಖರ್ಚನ್ನು ಮೀರಾ ಡಹಾಣು ಬಂಟ್ಸ್ ನ ಟ್ರಸ್ಟಿ ಸುರೇಶ್ ಶೆಟ್ಟಿ ವಹಿಸಿದ್ದರು. ಈ ಶಿಬಿರವನ್ನು ನಡೆಸಲು ವಿವಿಧ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷ ಭುಜಂಗ ಶೆಟ್ಟಿಯವರು ಕೃತಜ್ನತೆ ಸಲ್ಲಿಸಿದರು. 
Mumbai_news_photo_8 Mumbai_news_photo_3 Mumbai_news_photo_4 Mumbai_news_photo_5 Mumbai_news_photo_6 Mumbai_news_photo_7
ಬಹುಜನ ಅಘಾಡಿಯ ಉಪಾಧ್ಯಕ್ಷ ರವೀಂದ್ರ ಡಿ. ಶೆಟ್ಟಿ, ಮೀರಾ ಡಹಾಣು ಬಂಟ್ಸ್ ನ ಮಹಿಳಾ ವಿಭಾಗದ ಅಧ್ಯಕ್ಷೆ ಶಶಿ ಜೆ. ಶೆಟ್ಟಿ, ಆದಿವಾಸಿ ಸಮಾಜಿಕ ಜಾಗೃತಿ ಮಂಡಳದ ಅಧ್ಯಕ್ಷ ಸಂತೋಷ್ ತುಂಬಡ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
 
ಕಾರ್ಯದರ್ಶಿ ಸಂಪತ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಲತಾ ಶೆಟ್ಟಿ, ಪ್ರಕಾಶ್ ಹೆಗ್ಡೆ, ಸುಜಾತ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಯುವಾಧ್ಯಕ್ಷ ಚೇತನ್ ಶೆಟ್ಟಿ ವಂದಿಸಿದರು.

Write A Comment