ಮಂಗಳೂರು,ಮೇ.20: ಎಲ್ಲೆಲ್ಲೂ ಕಸ ಹಾಕುವ ಗುಣಕ್ಕೆ ಪರಿಹಾರವಾಗಿ ಕಸ ಹಾಕದಿರುವ ಗುಣ ಕೊಡಿ ಎನ್ನುವ ಘೋಷಣೆಯೊಂದಿಗೆ ಜಾಗೃತಿ ಮೂಡಿಸುವ ಕಲಾತ್ಮಕ ರಥ “ಸ್ವಚ್ಛತೆಗೆ ರಥ : ಒಬ್ಬ ಕಾರಣ” ಸ್ವಚ್ಛ ಭಾರತ ಎನ್ನುವ ಅಂದೋಲನಕ್ಕೆ ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಚಾಲನೆ ನೀಡಿದರು.
ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಆಗಮಿಸಿದ ಪ್ರೌಡಶಾಲೆ ಕಾಲೇಜುನ 80 ವಿಧ್ಯಾರ್ಥಿಗಳು ಈ ಅಂದೋಲನದಲ್ಲಿ ಪಾಲ್ಗೊಂಡು ವಿಶಿಷ್ಠ ರೀತಿಯಿಂದ ಈ ರಥವನ್ನು ಎಳೆದರು.
ಸ್ವಚ್ಛತೆ ರಥ ವನ್ನು ರಥಬೀದಿಯಿಂದ ಮಾರ್ಕೆಟ್ ಸುತ್ತಾಡಿ ತದ ನಂತರ ಅಪರಾಹ್ನ ಪಣಂಬೂರು ಬೀಚ್ವರೆಗೆ ಮುಂದುವರಿಯಲಿದೆ ಎಂದು ಸ್ವರೂಪ ಅಧ್ಯಯನ ಕೇಂದ್ರ ಮಂಗಳೂರು ಇದರ ಅಧ್ಯಕ್ಷರಾದ ಗೋಪಾಡ್ಕರ್ ತಿಳಿಸಿದರು.