ಅಂತರಾಷ್ಟ್ರೀಯ

ದುಶ್ಚಟಗಳಿಂದ ಹೊರ ಬರುವುದು ಹೇಗೆ..?

Pinterest LinkedIn Tumblr

6153index_482

ಇಂದಿನ ಯುವ ಜನಾಂಗ ಕುಡಿತ, ಸಿಗರೇಟು, ತಂಬಾಕು ಸೇವನೆ ಸೇರಿದಂತೆ ಹಲವು ದುಶ್ಚಟಗಳ ದಾಸರಾಗಿ ಪರಿತಪಿಸುತ್ತಿದೆ. ಮೊದಲು ಶೋಕಿಗೆಂದು ಆರಂಭವಾಗುವ ಈ ಚಟಗಳು ಬಳಿಕ ಅದರಿಂದ ಹೊರ ಬಾರದಂತೆ ಆಕ್ರಮಿಸಿಕೊಳ್ಳುತ್ತವೆ. ಇದರಿಂದಾಗಿ ಆರೋಗ್ಯ, ಮಾನಸಿಕ ಸ್ಥಿತಿಗತಿಗಳು ಹಾಳಾಗುತ್ತದಲ್ಲದೇ ಆರ್ಥಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಯಾವುದೇ ಒಂದು ದುಶ್ಚಟದಿಂದ ಹೊರ ಬರಲು ದೃಢ ನಿರ್ಧಾರ ಬಹು ಮುಖ್ಯವಾಗುತ್ತದೆ. ಈ ದುಶ್ಚಟಗಳಿಂದ ಆಗುತ್ತಿರುವ ಹಾನಿ ಕುರಿತು ಸಮಾಧಾನಚಿತ್ತವಾಗಿ ಕುಳಿತು ಯೋಚಿಸಿ ಬಳಿಕ ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಚಟವನ್ನು ತ್ಯಜಿಸಲು ತೆಗೆದುಕೊಂಡಿರುವ ನಿರ್ಧಾರದ ಕುರಿತು ಅತ್ಮೀಯರಾಗಿರುವವರೊಂದಿಗೆ ಹೇಳಿಕೊಂಡರೆ ಉತ್ತಮ. ಒಂದೊಮ್ಮೆ ಮತ್ತೆ ಆ ಚಟ ಮಾಡುವ ವೇಳೆ ಅವರು ಗಮನಿಸಿಯಾರೆಂಬ ಅಳುಕಿಗಾದರೂ ಅದನ್ನು ತ್ಯಜಿಸುತ್ತೇವೆ. ದುಶ್ಚಟ ತ್ಯಜಿಸಿದ ಬಳಿಕ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಮುಖ್ಯವಾಗುತ್ತದೆ. ಪುಸ್ತಕ ಓದುವುದು, ಸಂಗೀತ ಕೇಳುವುದು, ಧ್ಯಾನ, ಯೋಗ ಮೊದಲಾದ ಕಡೆ ಗಮನ ಹರಿಸುವುದು ಸೂಕ್ತ.

ಈ ಚಟದಿಂದ ಆಗುತ್ತಿರುವ ಆರ್ಥಿಕ ಹಾನಿಯ ಕುರಿತು ಲೆಕ್ಕ ಹಾಕಿ ಆ ಚಟವನ್ನು ತ್ಯಜಿಸಿದ ಬಳಿಕ ಉಳಿತಾಯವಾಗುತ್ತಿರುವ ಹಣವನ್ನು ಒಂದೆಡೆ ಕೂಡಿಡುತ್ತಾ ಬನ್ನಿ. ಆ ಮೊತ್ತವನ್ನು ತಿಂಗಳ ಬಳಿಕ ನೋಡಿದರೆ ಇದುವರೆಗೂ ಚಟಕ್ಕಾಗಿ ಸುರಿದ ಹಣದ ಕಾರಣಕ್ಕಾಗಿ ಪಶ್ಚಾತಾಪವಾಗುತ್ತದೆ. ಉಳಿತಾಯವಾಗಿರುವ ಈ ಹಣದಲ್ಲಿ ಕುಟುಂಬದವರನ್ನು ವಾರಾಂತ್ಯದ ದಿನಗಳಂದು ಹೊರಗಡೆ ಕರೆದುಕೊಂಡು ಹೋಗಿ ಊಟ ಮಾಡಿ. ಇದರಿಂದ ಅವರುಗಳಿಗೂ ಸಂತೋಷವಾಗುತ್ತದೆ. ನಿಮಗೂ ಆತ್ಮ ತೃಪ್ತಿ ದೊರೆಯುತ್ತದೆ. ಇನ್ನೇಕೆ ತಡ ಈಗಿನಿಂದಲೇ ದುಶ್ಚಟಗಳಿಂದ ಹೊರ ಬರಲು ಪ್ರಯತ್ನ ಆರಂಭಿಸಿ.

Write A Comment