ಮಂಗಳೂರು,ಮೇ.08: ಹಲವು ವರ್ಷಗಳ ಹಿಂದೆ ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡಿದ್ದ ಕೊಣಾಜೆ ಸಮೀಪದ ಕುಟುಂಬವೊಂದನ್ನು ಹಿಂದೂ ಜಾಗರಣಾ ವೇದಿಕೆ ಉಳ್ಳಾಲ ಘಟಕದವರು ಘರ್ ವಾಪಸೀ ಮೂಲಕ ಮರು ಹಿಂದು ಧರ್ಮಕ್ಕೆ ಸೇರಿಸಿದ್ದಾರೆ. ಕೊಣಾಜೆ ಬೆಳ್ಮ ಮೂಲದ ಕುಟುಂಬವೊಂದು ಹಲವು ವರ್ಷಗಳ ಹಿಂದೆ ಬಡತನದಿಂದ ನೊಂದು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರ್ಪಡೆಗೊಂಡಿತ್ತು.
ಇದೀಗ ನಾಲ್ವರು ಮಕ್ಕಳು ಮತ್ತು ತಾಯಿ ಹಿಂದೂ ಧರ್ಮ ಸೇರ್ಪಡೆಗೆ ಮನಸ್ಸು ಮಾಡಿದ ಹಿನ್ನೆಲೆಯಲ್ಲಿ ಕೊಣಾಜೆಯ ಹಿಂದೂ ಸಂಘಟನೆ ಕಾರ್ಯಕರ್ತರು ಹಿರಿಯ ಹಿಂದೂ ಮುಖಂಡರನ್ನು ಸಂಪರ್ಕಿಸಿದ್ದರು. ಅವರ ನಿರ್ದೇಶನುಸಾರ ಹಿಂದೂ ಜಾಗರಣಾ ವೇದಿಕೆ ಉಳ್ಳಾಲ ಘಟಕದ ಸುಮಾರು 18 ಮಂದಿಯಷ್ಟು ಕಾರ್ಯಕರ್ತರು ಕ್ರಿಶ್ಚಿಯನ್ ಕುಟುಂಬದ ಐದೂ ಮಂದಿಯನ್ನು ಹಿಂದು ಧರ್ಮಕ್ಕೆ ಸೇರಿಸಿರುವುದಾಗಿ ತಿಳಿದು ಬಂದಿದೆ.