ಕನ್ನಡ ವಾರ್ತೆಗಳು

ಕುಂದಾಪುರದ ಲಾಡ್ಜಿನಲ್ಲಿ ವೃದ್ಧೆ ಕೊಲೆ ಪ್ರಕರಣ; ಆರೋಪಿ ಹಾಗೂ ವೃದ್ಧೆಯ ಮಗಳು ಮುಂಬೈನಲ್ಲಿ ಪೊಲೀಸರ ವಶಕ್ಕೆ

Pinterest LinkedIn Tumblr

ಕುಂದಾಪುರ: ಕುಂದಾಪುರ ನಗರದ ಪ್ರತಿಷ್ಟಿತ ಲಾಡ್ಜೊಂದರಲ್ಲಿ ಎ.15 ಬುಧವಾರ ಸಂಜೆ ಗಂಗೊಳ್ಳಿ ಮೂಲದ ವೃದ್ಧೆ (58) ಎನ್ನುವವರನ್ನು ಕೊಂದು ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಮುಂಬೈನಲ್ಲಿ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

kundapura_Lodge_Crime

(ಆರೋಪಿ)

kundapura_Lodge_Crime (8)

(ಕೊಲೆಯಾದ ಲಲಿತಾ ದೇವಾಡಿಗ)

ಮುಂಬೈ ಮೂಲದವನು ಎನ್ನಲಾದ ಅಝರ್ ಪಝಲ್ ಖಾನ್ (32) ಸದ್ಯ ಈ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿದ್ದು, ಲಲಿತಾ ಸಾವಿನ ಬಳಿಕ ಆರೋಪಿಯೊಂದಿಗೆ ನಾಪತ್ತೆಯಾಗಿದ್ದ ಲಲಿತಾ ಪುತ್ರಿ ವೈಷ್ಣವಿ ಎಂಬಾಕೆಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು (ಭಾನುವಾರ) ಇಬ್ಬರನ್ನೂ ಕುಂದಾಪುರಕ್ಕೆ ಕರೆತರುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿದೆ. ಬಳಿಕವಷ್ಟೇ ಕೊಲೆಗೆ ಕಾರಣವೇನು ಎಂಬುದು ತಿಳಿಯಲಿದೆ. ಅಲ್ಲದೇ ಈ ಕೊಲೆಯಲ್ಲಿ ಮಗಳು ವೈಷ್ಣವಿ ಪಾತ್ರವಿತ್ತೇ? ಮೊದಲಾದ ಮಹತ್ವದ ವಿಚಾರಗಳು ತಿಳಿಯಲಿದೆ.

ಒಟ್ಟಿನಲ್ಲಿ ಪ್ರಕರಣ ನಡೆದ 18 ದಿನಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Write A Comment