ಕನ್ನಡ ವಾರ್ತೆಗಳು

ಬೆಳ್ಳಂಬೆಳಗ್ಗೆ ಅವಘಡ; ಟಿಪ್ಪರ್ ಹಾಗೂ ಆಕ್ಟಿವ್ ಹೋಂಡಾ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

Pinterest LinkedIn Tumblr

ಉಡುಪಿ: ಆಕ್ಟಿವ್ ಹೊಂಡಾ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಆಕ್ಟಿವಾ ಹೊಂಡಾ ಸವಾರರಿಬ್ಬರು ಧಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿಯ ಬೀಡಿನಗುಡ್ಡೆ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

Udp_Accident_Death Udp_Accident_Death (1)

ಆಕ್ಟಿವಾ ಸವಾರರಾದ ಬಂಟಕಲ್ ನಿವಾಸಿಗಳಾದ ನಾರಾಯಣ ಭಟ್ ಹಾಗೂ ರಾಮಧಾಸ್ ಭಟ್ ಎನ್ನುವವರೇ ಸಾವನ್ನಪ್ಪಿದ ದುರ್ದೈವಿಗಳಾಗಿದ್ದರೆ.

ಪುರೋಹಿತ ವ್ರತ್ತಿ ಮಾಡಿಕೊಂಡಿದ್ದ ಇವರು ಕಾರ್ಯಕ್ರಮಕ್ಕೆ ತೆರಳಿ ಪುನಃ ಮರಳುತ್ತಿರುವಾಗ ಬೀಡಿನಗುಡ್ಡೆ ಸಮೀಪದಲ್ಲಿ ಎದುರಿನಿಂದ ಬಂದ ಟಿಪ್ಪರ್ ಇವರ ಆಕ್ಟಿವಾಗೆ ಡಿಕ್ಕಿಯಾಗಿದೆ. ಈ ವೇಳೆ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮ್ರತಪಟ್ಟಿದ್ದಾರೆ.

ಉಡುಪಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Write A Comment