ಕನ್ನಡ ವಾರ್ತೆಗಳು

ಹಣಕಾಸಿನ ತಗಾದೆ; ತಮ್ಮನಿಂದ ಅಣ್ಣನ ಕೊಲೆ

Pinterest LinkedIn Tumblr

1334Murder_title

ಉಡುಪಿ: ಹಣಕಾಸಿನ ವಿಚಾರವಾಗಿ ಭಾನುವಾರ ರಾತ್ರಿ ನಡೆದ ಜಗಳದಲ್ಲಿ ತಮ್ಮ ಅಣ್ಣನನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ.

ಕೊಡವೂರು ಮಧ್ವ ನಗರದ ಕಂಬಳಕಟ್ಟ ನಿವಾಸಿ ಪ್ರಕಾಶ್ ಆಚಾರ್ಯ(32) ಮೃತ ವ್ಯಕ್ತಿ. ಉಮೇಶ್ ಆಚಾರ್ಯ ಕೊಲೆಗೈದು ಪರಾರಿಯಾದ ಆರೋಪಿ. ಅಣ್ಣ ಮತ್ತು ತಮ್ಮ ತಾಯಿ ಜತೆಗೆ ಒಂದೇ ಮನೆಯಲ್ಲಿ ವಾಸವಿದ್ದು ಇಬ್ಬರಿಗೂ ಕುಡಿತದ ಚಟವಿತ್ತು. ಅಣ್ಣ ಪೇಂಟಿಂಗ್ ಕೆಲಸ ಮಾಡುತ್ತಿದ್ದರೆ, ತಮ್ಮ ರಿಕ್ಷಾ ಚಾಲಕನಾಗಿದ್ದಾನೆ.

ಮೂರು ವರ್ಷದಿಂದ ಮನೆ ಕಟ್ಟಲು ತೊಡಗಿದ್ದು ಹಣಕಾಸು ವಿಚಾರದಲ್ಲಿ ಆಗಾಗ ಜಗಳವಾಡುತ್ತಿದ್ದರು. ಭಾನುವಾರ ರಾತ್ರಿ ಉಮೇಶ್ ಮತ್ತು ಪ್ರಕಾಶ್ ಇಬ್ಬರೂ ಕುಡಿದು ಬಂದು ಮಧ್ಯರಾತ್ರಿ ತನಕವೂ ಜಗಳವಾಡಿದ್ದರು.

ಮಾತಿಗೆ ಮಾತು ಬೆಳೆದು ದೊಣ್ಣೆಯಿಂದ ಹೊಡೆದ ಸಂದರ್ಭ ಅಣ್ಣನ ತಲೆಯಲ್ಲಿ ರಕ್ತ ಹರಿಯುತ್ತಿದ್ದುದನ್ನು ಕಂಡ ಉಮೇಶ್ ಜಿಲ್ಲಾಸ್ಪತ್ರೆಗೆ ರಿಕ್ಷಾದಲ್ಲಿ ಕರೆದೊಯ್ದ. ಆದರೆ ಪ್ರಕಾಶ್ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದು ನಂತರ ಉಮೇಶ್ ಪರಾರಿಯಾಗಿದ್ದ . ಸೋಮವಾರ ಸಂಜೆ ಹೊತ್ತಿಗೆ ಮಣಿಪಾಲದಲ್ಲಿ ಆರೋಪಿ ಪತ್ತೆಯಾಗಿದ್ದಾನೆ. ಪ್ರಕಾಶ್ ಆಚಾರ್ಯರ ಪತ್ನಿ ಉಮಾಶ್ರೀ ಮಲ್ಪೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಅಣ್ಣಾಮಲೈ ಹಾಗೂ ಡಿವೈಎಸ್‌ಪಿ ಸಂತೋಷ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Write A Comment