ಕನ್ನಡ ವಾರ್ತೆಗಳು

ಬೈಕ್‌ಗಳೆರಡು ಡಿಕ್ಕಿ : ಓರ್ವ ಗಂಭೀರ

Pinterest LinkedIn Tumblr

ಕುಂದಾಪುರ: ಬೈಕ್‌ಗಳೆರಡು ಪರಸ್ಪರ ಎದುರು ಬದುರಾಗಿ ಡಿಕ್ಕಿ ಹೊಡೆದ ಪರಿಣಾಮ ಒಂದು ಬೈಕಿನ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ತಲ್ಲೂರು ಸಮೀಪ ಶುಕ್ರವಾರ ರಾತ್ರಿ ನಡೆದಿದೆ.

ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಕೋಟೇಶ್ವರದ ಕೋಡಿ ಹಳೆ‌ಅಳಿವೆ ನಿವಾಸಿ ಶೀನ ಪೂಜಾರಿ ಎಂಬಾತನ ಮಗ ಸುಕೇಶ್ ಪೂಜಾರಿ(30) ಎಂದು ಗುರುತಿಸಲಾಗಿದೆ.

Kundapura_Baik_Accident

ಘಟನೆಯ ವಿವರ: ಗಾಯಗೊಂಡಿರುವ ಸುಕೇಶ್ ಪೂಜಾರಿ ತನ್ನ ಮೋಟಾರ್ ಬೈಕಿನಲ್ಲಿ ಬಗ್ವಾಡಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಜತ್ರೋತ್ಸವ ಮುಗಿಸಿ ಕಾಳಾವರದ ಸಳ್ವಾಡಿ ನಿವಾಸಿ ಮೋಹನ ಎಂಬಾತನ ಮಗ ಅಜಿತ್ ಎಂಬುವರನ್ನು ಕುಳ್ಳಿರಿಸಿಕೊಂಡು ಕೋಟೇಶ್ವರಕ್ಕೆ ಪ್ರಯಾಣಿಸುತ್ತಿದ್ದನು. ಇದೇ ಸಂದರ್ಭ ಎದುರುಗಡೆಯಿಂದ ಬರುತ್ತಿದ್ದ ಕೆಂಚನೂರು ಗ್ರಾಮದ ಹಾಡಿಮನೆ ನಿವಾಸಿ ಚಂದ್ರಶೇಖರ ಶೆಟ್ಟಿ ಎಂಬಾತನ ಪುತ್ರ ಶ್ರೀಧರ ಶೆಟ್ಟಿ(23) ತೆಕ್ಕಟ್ಟೆಯಿಂದ ಕೆಂಚನೂರು ಕಡೆಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ.

ರಾತ್ರಿ ಸುಮಾರು 8.45ರ ಸುಮಾರಿಗೆ ತಲ್ಲೂರಿನ ಹೋಟೇಲೊಂದರ ಎದುರು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಶ್ರೀಧರ ಶೆಟ್ಟಿ ಎಂಬಾತ ಚಲಾಯಿಸುತ್ತಿದ್ದ ಬೈಕನ್ನು ಯಾವುದೇ ಸೂಚನೆ ನೀಡದೇ ಏಕಾ‌ಏಕಿ ರಸ್ತೆಯ ಬದಿಗೆ ಬಂದ ಸಂದರ್ಭ ಮುಖಾಮುಖಿ ಡಿಕ್ಕಿಯಾಗಿದೆ.

ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Write A Comment