ಕನ್ನಡ ವಾರ್ತೆಗಳು

ತೆಂಗಿನ ಮರದಿಂದು ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

Pinterest LinkedIn Tumblr

Bhatkala_Crime_news

ಕುಂದಾಪುರ/ಭಟ್ಕಳ: ತೆಂಗಿನ ಮರದಿಂದ ಬಿದ್ದು ಎರಡು ಕೈ ಹಾಗೂ ಕಾಲಿಗೆ ಗಾಯಗೊಂಡು ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವರು ಒಂದು ವಾರಗಳ ಬಳಿಕ ಆಸ್ಪತ್ರೆಯಲ್ಲಿಯೇ ಸಾವನಪ್ಪಿದ ಘಟನೆ ನಡೆದಿದೆ.

ಭಟ್ಕಳದ ಸರ್ಪನಕಟ್ಟೆ ನಿವಾಸಿ ದುರ್ಗಯ್ಯ ಮಾಸ್ತಯ್ಯ ನಾಯ್ಕ್ (30) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ.

Bhatkala_Crime_news (2) Bhatkala_Crime_news (6) Bhatkala_Crime_news (3) Bhatkala_Crime_news (1) Bhatkala_Crime_news (4) Bhatkala_Crime_news (5) Bhatkala_Crime_news (8) Bhatkala_Crime_news (7)

ಘಟನೆ ವಿವರ: ಮಾ.23 ರಂದು ಮನೆ ಸಮೀಪದ ತೆಂಗಿನ ಮರದಲ್ಲಿನ ಕಾಯಿ ಕೀಳಲು ಮರವೇರಿದ್ದಾಗ ಆಯ ತಪ್ಪಿ ಕೆಳಗಡೆ ಬಿದ್ದ ಅವರನ್ನು ಕೂಡಲೇ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ದುರ್ಗಯ್ಯ ಅವರ ಎರಡು ಕೈ ಹಾಗೂ ಒಂದು ಕಾಲಿಗೆ ಗಾಯ ಹಾಗೂ ಮೂಳೆ ಮುರಿತ ಉಂಟಾಗಿದ್ದು ಚಿಕಿತ್ಸೆಯನು ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಅವರ ಆರೋಗ್ಯ ಸಹಜ ಸ್ಥಿತಿಯತ್ತ ಬರುತ್ತಿತ್ತು. ಬುಧವಾರ ಮಧ್ಯಾಹ್ನದ ಸುಮಾರಿಗೆ ಇವರು ಆಸ್ಪತ್ರೆಯಲ್ಲಿಯೇ ಮ್ರತಪಟ್ಟಿದ್ದಾರೆ.

ವಿವಾಹಿತರಾಗಿರುವ ಇವರಿಗೆ 6 ತಿಂಗಳ ಗಂಡು ಮಗುವಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರ ಸಹೋದರ ಮದುವೆ ಮುಂದಿನ ತಿಂಗಳು ನಡೆಯುವುದರಲ್ಲಿತ್ತು.

Write A Comment