ಮಂಗಳೂರು,ಫೆ.28 : ದ.ಕ.ಜಿಲ್ಲೆಯ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ (ಎನ್ ಎಸ್ ಯು ಐ) ಜಿಲ್ಲಾ ಸಮಿತಿಯ ಚುನಾವಣೆಯು ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದ್ದು, ಜಿಲ್ಲಾ ವಿದ್ಯಾರ್ಥಿ (ಎನ್ ಎಸ್ ಯು ಐ) ಘಟಕ ಅಧ್ಯಕ್ಷರಾಗಿ ಅಶ್ರೀತ್ ಜಿ ಪಿರೇರಾರವರು ಪುನರಾಯ್ಕೆಯಾಗಿದ್ದಾರೆ.
ಜಿಲ್ಲಾ ಉಪಾಧ್ಯಕ್ಷರಾಗಿ ಮನ್ ಮೋಹನ ಜೋಯಿಸ್ ,ಅಶ್ಚಕ್, ಕು. ಶೈನಿ ಕು.ಅನ್ವಿತಾ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪೃಥ್ವಿ ಸಾಲ್ಯಾನ್, ಇರ್ಶಾದ್ ಎನ್ ಜಿ, ರಿಝ್ವಾನ್, ಕು. ದೀಕ್ಷಾರವರು ಜಿಲ್ಲಾ ಕಾರ್ಯದರ್ಶಿಯಾಗಿ ಆಕರ್ಶ್ ಬಂಗೇರಾ, ಓಝ್ವಿನ್ ಡಿಸೋಜಾ, ಸವಾದ್ ಗೂನಡ್ಕ , ಕು.ರಶ್ಮಿಯ ಶೇಖ್ ರವರು ಚುನಾಯಿತರಾಗಿರುತ್ತಾರೆ.
ಈ ಚುನಾವಣೆಯಲ್ಲಿ ಸುಮಾರು 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ ಹಾಕಿರುವುದು ಜಿಲ್ಲೆಯ ಕಾಂಗ್ರೆಸ್ ಇತಿಹಾಸದಲ್ಲೇ ವಿಶೇಷವಾಗಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.