ಕನ್ನಡ ವಾರ್ತೆಗಳು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ವಾಹನ ಜಾಥಾ

Pinterest LinkedIn Tumblr

popular_front_photo_1

ಮಂಗಳೂರು,ಫೆ.18: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ಥಾಪನಾ ದಿನದ ಅಂಗವಾಗಿ 17-02-2015 ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಡಿವಿಷನ್ ವತಿಯಿಂದ ಬ್ರಹತ್ ಜಾಥಾ ಹಾಗು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು .

ಮಧ್ಯಾನ 3:30 ಗಂಟೆಗೆ ವಾಹನ ಜಾಥವನ್ನು ಜಿಲ್ಲಾ ಸಮಿತಿ ಸದಸ್ಯ ಏ ಎಮ್ ಅಥಾವುಲ್ಲ ಹಾಗು ಡಿವಿಷನ್ ಅಧ್ಯಕ್ಷರಾದ ಮಜೀದ್ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಲಾಯಿತು . ಜಾಥವು ಜೋಕಟ್ಟೆ , ಅಂಗರಗುಂಡಿ , ಬೈಕಂಪಾಡಿ , ಕೂಳೂರು , ಕಾವೂರು , ಕುಂಜತ್ಬೈಲ್ , ಮರವೂರು , ಬಜ್ಪೆ , ಪೋರ್ಕೊಡಿ ಮೂಲಕ ಜೋಕಟ್ಟೆಯಲ್ಲಿ ಸಮಾಪ್ತಿಗೊಂಡಿತು .

popular_front_photo_2 popular_front_photo_3 popular_front_photo_4

ಸಂಜೆ 7 ಗಂಟೆಗೆ ಜೋಕಟ್ಟೆಯ ಕೆ ಬಿ ಎಸ್ ನಲ್ಲಿ ಸಾರ್ವಜನಿಕ ಕಾರ್ಯಕ್ರಮವು ನಡೆಯಿತು , ಕಾರ್ಯಕ್ರಮದ ಅಧ್ಯಕ್ಷತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಹನೀಫ್ ವಹಿಸಿಕೊಂಡಿದ್ದರು , ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯರಾದ ಇಮ್ತಿಯಾಜ್ ತುಂಬೆ ಪಾಪ್ಯುಲರ್ ಫ್ರಂಟ್ ಬೆಳುದು ಬಂಡ ಹಾದಿ ಮೇಲೆ ಬೆಳಕು ಚೆಲ್ಲಿದರು , ದಿಕ್ಶೂಚಿ ಭಾಷಣ ಮಾಡಿದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಅಧ್ಯಕ್ಷರಾದ ಏ ಕೆ ಅಶ್ರಫ್ ರವರು ಮಾತನಾಡುತ್ತಾ ಅಲ್ಪಸಂಖ್ಯಾತರು ದಲಿತರು ನಿರ್ಗತಿಕರು ಬಡ ಜನತೆ ರಾಜಕೀಯವಾಗಿ ಸಬಲೀಕರಣಗೊಳ್ಳಬೇಕೆಂಬ ಕರೆ ನೀಡಿದರು .

ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಹನೀಫ್ ಫ್ಯಾಸಿಸ್ಟ್ ಗಳಿಗೆ ನೇರ ಸವಾಲು ಹಾಕಿದರು .

wenlock_cooler_prblm_1 popular_front_photo_5

ವೇದಿಕೆಯಲ್ಲಿ ಬಜ್ಪೆ ಕೇಂದ್ರ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಇಂಜಿನಿಯರ್ , ನೂರಾನಿಯ್ಯ ಮಸ್ಜಿದ್ ಜರಿನಗರ ಬಜ್ಪೆ ಇದರ ಅಧ್ಯಕ್ಷರಾದ ಅಬ್ದುಲ್ ಹಮೀದ್ , ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಕ್ಉನ್ಯಿ, ಬಜ್ಪೆ ಡಿವಿಷನ್ ಅಧ್ಯಕ್ಷರಾದ ಮಜೀದ್ , ಬಜ್ಪೆ ಪ್ರಧಾನ ಕಾರ್ಯದರ್ಶಿ ಡಿವಿಷನ್ ಕಾರ್ಯದರ್ಶಿಗಳಾದ ಸಿರಾಜ್ ಹಾಗು ಇನ್ನಿತರರು ಉಪಸ್ತಿತರಿದ್ದರು .

ಹಬೀಬ್ ಸ್ವಾಗತಿಸಿದರು , ಸಿದ್ದಿಕ಼್ ಧನ್ಯವಾದ ಸಮರ್ಪಿಸಿದರು

Write A Comment