ಕನ್ನಡ ವಾರ್ತೆಗಳು

ಕಟೀಲು ಶ್ರೀ ದೇವಿಗೆ 4.75 ಕೋಟಿ ಮೌಲ್ಯದ ಚಿನ್ನದ ರಥ ಸಮರ್ಪಣೆ

Pinterest LinkedIn Tumblr

kateel_gold_ratha_1

ಮಂಗಳೂರು,ಫೆ.09 : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ 4.5 ಕೋಟಿ ರೂ. ವೆಚ್ಚದ ಚಿನ್ನದ ರಥ ಸಮರ್ಪಣೆ ನೆರವೇರಿತು. ದೇವಳದ ರಥಬೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ನಿಂಗಯ್ಯ ಅವರಿಗೆ ಮುಜರಾಯಿ ಸಚಿವ ಟಿ.ಬಿ. ಜಯಚಂದ್ರ ಅವರು ಚಿನ್ನದ ರಥವನ್ನು ಹಸ್ತಾಂತರಿಸಿದರು. ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು , ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಥೀಶತೀರ್ಥ ಶ್ರೀಪಾದರು ಆರ್ಶಿವಚನ ನೀಡಿದರು.

kateel_gold_ratha_2 kateel_gold_ratha_3

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್‌ ವಹಿಸಿದ್ದರು. ಚಿನ್ನದ ರಥ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡ ಉಡುಪಿ ಸ್ವರ್ಣ ಸಂಸ್ಥೆಯ ರಾಮದಾಸ ನಾಯಕ್‌ ಹಾಗೂ ರಥಶಿಲ್ಪಿ ಸುದರ್ಶನ ಆಚಾರ್ಯ ಅವರನ್ನು ಗೌರವಿಸಲಾಯಿತು.

kateel_gold_ratha_7 kateel_gold_ratha_4 kateel_gold_ratha_6

ವೇದಿಕೆಯಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ, ಸಂಸದ ನಳಿನ್‌ ಕುಮಾರ್‌ ಕಟೀಲು, ಅರಣ್ಯ ಸಚಿವ ಬಿ. ರಮಾನಾಥ ರೈ, ಶಾಸಕರಾದ ಮೊದಿನ್‌ ಬಾವಾ, ಕ್ಯಾ. ಗಣೇಶ್‌ ಕಾರ್ಣಿಕ್‌, ಬಂಟರ ಮಾತೃ ಸಂಘದ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ ಕುಮಾರ್‌ ರೈ, ಮುಂಬಯಿ ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ದೇವಳದ ಆನುವಂಶಿಕ ಅರ್ಚಕರಾದ ಕೆ. ವಾಸುದೇವ ಆಸ್ರಣ್ಣ, ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ಕೆ. ಅನಂತಪದ್ಮನಾಭ ಆಸ್ರಣ್ಣ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ವರದಿ :ರವಿರಾಜ್ ಕಟೀಲು

Write A Comment