ಅಂಧ್ರ,ಫೆ.05 : ಆಂಧ್ರಪ್ರದೇಶದ ಭೀಮಾವರಂನಲ್ಲಿ ಕರ್ಣಾಟಕ ಬ್ಯಾಂಕಿನ 641 ನೇ ಶಾಖೆಯ ಉದ್ಘಾಟನೆಯನ್ನು ಗುರುವಾರದಂದು ಡಿಎನ್ಆರ್ ಕಾಲೇಜ್ ಅಸೋಸಿಯೇಶನ್ಸ್ನ ಅಧ್ಯಕ್ಷ ಶ್ರೀ ಜಿ.ವಿ. ನರಸಿಂಹರಾಜು ನೆರವೇರಿಸಿದರು.
ಭೀಮಾವರಂ ಮುನಿ ಪಾಲ್ ಚೇರ್ಮಾನ್ ಶ್ರೀ ಕೋಟಿಕಲಪೂಡಿ ಗೋವಿಂದ ರಾವ್, ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀ ರಾಘವೇಂದ್ರ ಭಟ್ ಎಮ್. ಬ್ಯಾಂಕಿನ ಹೈದರಾಬಾದ್ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾಪ್ರಬಂಧಕ ಶ್ರೀ ಬಿ.ಎಸ್. ರಾಜ, ಮುಖ್ಯ ಪ್ರಬಂಧಕ ಶ್ರೀ ಕೃಷ್ಣ ಕಿಶೋರ್ ಸಿ, ಭೀಮಾವರಂ ಶಾಖಾ ಪ್ರಬಂಧಕ ಶ್ರೀ ವಿ.ವಿ.ಎಸ್. ಸುಬ್ರಮಣ್ಯಂ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.