ಕನ್ನಡ ವಾರ್ತೆಗಳು

ಕದ್ರಿ ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ನಿಂಗಯ್ಯ‌ ಅವರಿಗೆ ಸಾರ್ವಜನಿಕ ಸನ್ಮಾನ.

Pinterest LinkedIn Tumblr

kadri_new_photo

ಮಂಗಳೂರು,ಜ.28: ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ನಿಂಗಯ್ಯ‌ಅವರನ್ನು ದೇವಳಕ್ಕೆ ನೀಡಿದ ವಿಶಿಷ್ಟ ಸೇವೆಗಾಗಿ ದೇವಳದಲ್ಲಿ ನಡೆದ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ‌ಅಧ್ಯಕ್ಷರಾದ ಶ್ರೀ ಎ. ಜನಾರ್ದನ ಶೆಟ್ಟಿ ಸನ್ಮಾನಿಸಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷರು ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅಭಿನಂದಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಕೆ. ರಾಘವೇಂದ್ರ‌ ಅಡಿಗ, ದೇವದಾಸ್‌ ಕುಮಾರ್, ಶ್ರೀಮತಿ ಸುರೇಖ ರಾಜ್, ಶ್ರೀಮತಿ ನಿವೇದಿತಾ ಶೆಟ್ಟಿ, ಎಚ್.ಕೆ. ಪುರುಷೋತ್ತಮ್, ಡಾ| ಪಿ. ಅನಂತಕೃಷ್ಣ ಭಟ್ ಹಾಗೂ ಕಿಶೋರ್ ಡಿ. ಶೆಟ್ಟಿ, ಗೋಕುಲ್‌ ಕದ್ರಿ, ಮೋಹನ್‌ ಕೊಪ್ಪಲ ಕದ್ರಿ, ನಿರಂಜನ್ ಸಾಲಿಯಾನ್, ಕಿರಣ್‌ಜೋಗಿ, ದಿನೇಶ್‌ದೇವಾಡಿಗ, ವಿಶ್ವನಾಥ್‌ಆಚಾರ್, ಸುಧಾಕರರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.

Write A Comment