ಮಂಗಳೂರು,ಜ.21 : ತೊಕ್ಕೊಟ್ಟು ಬಳಿಯ ಕಲ್ಲಾಪು ಪಟ್ಲ ಎಂಬಲ್ಲಿ ನೆರೆಕರೆಯ ಮನೆಗಳ ನಡುವಿನ ಜಗಳದ ಹಿನ್ನೆಲೆಯಲ್ಲಿ ಒಂದು ಕಡೆಯವರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಚಪ್ಪಲಿಗೆ ಅಂಟಿಸಿ, ಇನ್ನೊಬ್ಬರ ಮನೆಯ ಗೇಟಿಗೆ ತೂಗುಹಾಕಿ ದೇಶದ ಪ್ರಧಾನಿಗೆ ಅವಮಾನ ಮಾಡಿರುವರು.
ವೈಯಕ್ತಿಕ ವಿವಾದಗಳನ್ನು ರಾಜಕೀಯಗೊಳಿಸಿ ದೇಶದ ಪ್ರಧಾನಿಗೆ ಮಾಡಿದ ಅವಮಾನ, ದೇಶಕ್ಕೆ ಮತ್ತು ಜನರಿಗೆ ಮಾಡಿದ ಅವಮಾನ. ವೈಯಕ್ತಿಕ ವಿಚಾರಗಳಲ್ಲಿ ದೇಶದ ಪ್ರಧಾನಿಗೆ ಅಪಹಾಸ್ಯ ಮಾಡಿ ಅವಮಾನ ಮಾಡಿದ ಘಟನೆ ಗಂಭೀರ ವಿಷಯವಾಗಿದೆ.
ತಕ್ಷಣ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿ ಉಳ್ಳಾಲ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.