ಕನ್ನಡ ವಾರ್ತೆಗಳು

ಕಾಲುವೆಗೆ ಉರುಳಿದ ಟ್ರ್ಯಾಕ್ಟರ್: ಒಂದೇ ಕುಟುಂಬದ ನಾಲ್ವರು ಸಾವು

Pinterest LinkedIn Tumblr

trator_fall_water

ಜೋಗುಂಡಬಾವಿ,ಜ.20: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಜೋಗುಂಡಬಾವಿ ಗ್ರಾಮದ ನಾರಾಯಣಪುರ ಎಡದಂಡೆ ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಟ್ರ್ಯಾಕ್ಟರ್ ಹಾಗೂ ಬಟ್ಟೆ ತೊಳೆಯಲು ನಾರಾಯಣಪುರ ಎಡದಂಡೆ ಕಾಲುವೆಗೆ ತೆರಳಿದ್ದರು. ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಚಾಲಕ ಶರಣಪ್ಪ ಟ್ರ್ಯಾಕ್ಟರನ್ನು ಹಿಂಬದಿಯಾಗಿ ಚಲಾಯಿಸುತ್ತಿರುವಾಗ ಕಾಲುವೆಗೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ.

ಮೃತರೆಲ್ಲರು ಸುರಪುರ ತಾಲೂಕಿನ ಎಣ್ಣಿವಡಗೇರಾ ಗ್ರಾಮದ ಗದ್ದೆಮ್ಮ(30), ಮಕ್ಕಳಾದ ಕಾಳಿಂಗ(7), ಬೀರಲಿಂಗ(8) ಶರಣಪ್ಪ(28) ಎಂದು ಗುರುತಿಸಲಾಗಿದೆ. ಈ ದುರಂತ ಸಂಭವಿಸಿ ಎರಡು ಗಂಟೆ ಕಳೆದರು ಘಟನಾ ಸ್ಥಳಕ್ಕೆ ಪೊಲೀಸರು ಬಾರದ ಹಿನ್ನೆಲೆಯಲ್ಲಿ ಎಣ್ಣೆವಡಗೇರಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾರಾಯಣಪುರ ಎಡದಂಡೆ ಕಾಲುವೆಗೆ ನಿನ್ನೆಯಷ್ಟೇ ಬಸವಸಾಗರ ಡ್ಯಾನಿಂದ ನೀರು ಹರಿಸಲಾಗಿತ್ತು.

Write A Comment