ಉಡುಪಿ: ನೌಕರರಿಗೆ ಸಂಬಳ ನೀಡಲು ಸ್ಕೂಟಿಯಲ್ಲಿ ಕೊಂಡುಹೋಗುತ್ತಿದ್ದ 7 ಲಕ್ಷ ಹಣವನ್ನು ದೋಚಿದ ಘಟನೆ ಉಡುಪಿಯ ಮಲ್ಪೆ ಸಮೀಪದ ಕಡೇಕಾರು ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಇಲ್ಲಿನ ನಿವಾಸಿ ಲೋಕನಾಥ ಎನ್ನುವವರಿಗೆ ಸಂಬಂಧಿಸಿದ ಹಣ ಇದಾಗಿದೆ. ಮುಸುಕುಧಾರಿಗಳಾದ ಮೂವರು ದುಷ್ಕರ್ಮಿಗಳಿಂದ ಈ ಕ್ರತ್ಯ ನಡೆದಿದೆ ಎನ್ನಲಾಗಿದೆ.
ಲೋಕನಾಥ ಬೋಟು (ಮೀನುಗಾರಿಕೆ)ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಬೆಳಿಗ್ಗೆ ನೌಕರರಿಗೆ ಸಂಬಳ ನೀಡುವ ಸಲುವಾಗಿ ಮನೆಯಿಂದ ಸ್ಕೂಟಿಯಲ್ಲಿ ಮಲ್ಪೆಯತ್ತ ತೆರಳುತ್ತಿರುವ ಸಂದರ್ಭ ಕಡೆಕಾರು ಬಳಿ ಈ ಘಟನೆ ನಡೆದಿದೆ. ಬೈಕಿನಲ್ಲಿ ಬಂದ ಮುಸುಕುಧಾರಿಗಳಾದ ಮೂವರು ಹಣ ದೋಚಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.