ಕನ್ನಡ ವಾರ್ತೆಗಳು

ಹುಂಡೈ ಕಾರು ಖರೀದಿಗಾಗಿ ಬ್ಯಾಂಕಿಗೆ 10,00,000/-ರೂ ಉಂಡೆ ನಾಮ ಹಾಕಿದ ಭೂಪ…!

Pinterest LinkedIn Tumblr

note

ಉಡುಪಿ: ಹುಂಡೈ ಕಾರು ಖರೀದಿಸುವ ಸಲುವಗಿ ವಿಜಯ ಬ್ಯಾಂಕಿನಲ್ಲಿ ಸಾಲ ಅಪಡೆದ ಭೂಪನೋರ್ವ ವ್ಯಾಂಕಿಗೆ ಹಣವನ್ನು ಮರುಪಾವತಿಸದೇ, ಅವರು ನೀಡಿದ ನೋಟಿಸಿಗೂ ಬೆಲೆ ಕೊಡದ ಹಿನ್ನೆಲೆಯಲ್ಲಿ ಬ್ಯಾಂಕ್ ಮೂಲದವರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.

ಘಟನೆ ವಿವರ: ಯು.ನಜೀರ್‌ ಆಹಮ್ಮದ್‌ ಎಂಬಾತ 29-04-13ರಂದು Hyundai Verna (ಹುಂಡೈ ವೆರ್ನಾ) ಕಾರು ಖರೀದಿಸುವ ಸಲುವಾಗಿ ಮಣಿಪಾಲದ ವಿಜಯ ಬ್ಯಾಂಕಿನಲ್ಲಿ 10,00,000/-ರೂ ಸಾಲವನ್ನು ಪಡೆದುಕೊಂಡಿದ್ದು, ಸಾಲ ಪಡೆದುಕೊಂಡ ಬಳಿಕ ಆರೋಪಿ ನಾಪತ್ತೆ.. ಬ್ಯಾಂಕಿನವರು ಹೇಳುವ ಪ್ರಕಾರ ಆತ ಬ್ಯಾಂಕ್ ಕರಾರಿನಲ್ಲಿ ನಮೂದಿಸಿದಂತೆ ಸಾಲವನ್ನು ಮರುಪಾವತಿಸದೆ ಇದ್ದು, ಈ ವಾಹನವನ್ನು ಹಾಜರುಪಡಿಸುವಂತೆ ಹಲವಾರು ಬಾರಿ ನೋಟಿಸನ್ನು ನೀಡದರೂ ಕೂಡ ಅದಕ್ಕೆ ಉತ್ತರಿಸದೇ ಬ್ಯಾಂಕಿನಿಂದ ಪಡೆದ ಸಾಲವನ್ನು ಮರುಪಾವತಿಸದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Write A Comment