ಕುಂದಾಪುರ : ಹಿಂದೂ ಜಾಗರಣ ವೇದಿಕೆ ಸಿದ್ದಾಪುರ ವಲಯ ಹೊಸಂಗಡಿ ಘಟಕದ ಉದ್ಗಾಟನಾ ಸಮಾರಂಭ ಭಾನುವಾರ ಸಂಜೆ ಹೊಸಂಗಡಿಯ ಸಾರ್ವಜನಿಕ ಗಣೇಶೋತ್ಸವ ರಂಗಮಂದಿರದಲ್ಲಿ ನಡೆಯಿತು.
ಮಹಾಬಲ ಗೊಲ್ಲ ಅದ್ಯಕ್ಷತೆಯನ್ನು ವಹಿಸಿದ್ದರು,ಶ್ರೀ ಹರಿದಾಸ ಬಿ.ಎಸ್ ಶಿವಪುರ,ಹೆಬ್ರಿ ಇವರು ಉದ್ಗಾಟಿಸಿ ಧಾರ್ಮಿಕ ಪ್ರವಚನ ನೀಡಿದರು. ಕರ್ನಾಟಕ ದಕ್ಷಿಣ ಪ್ರಾಂತ್ಯದ ಹಿ.ಜಾ.ವೇ ಸಂಚಾಲಕರಾದ ಕೆ.ಟಿ.ಉಲ್ಲಾಸ್ ಮುಖ್ಯ ಭಾಷಾಣಕಾರರಾಗಿ ಹಿ,ಜಾ.ವೇ ಯ ಉದ್ದೇಶ,ಮತ್ತು ಅಗತ್ಯತೆಯ ಬಗ್ಗೆ ಮತನಾಡಿದರು. ಉದ್ಗಾಟನೆಯ ನಂತರ ಬೇಕ್ ರ್ಯಾಲಿ ನಡೆಯಿತು. ಸಾವಿರಾರು ಹಿ.ಜಾ,ವೇ ಯ ಕಾರ್ಯರ್ಕರು ಅಭಿಮಾನಿಗಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ಹೊಸಂಗಡಿ ಘಟಕದ ಅಧ್ಯಕ್ಷ ರಾಘವೇಂದ್ರ ಬಾಳೆಜೇಡ್ದು, ಸಿದ್ದಾಪುರ ವಲಯದ ಸಂಚಾಲಕ ಹರ್ಷ ಜನ್ಸಾಲೆ,ಭಜರಂಗದಳದ ಸಂಚಾಲಕ ಭಾಸ್ಕರ್ ಶೆಟ್ಟಿ ಹೆನ್ನಾಬೇಲು,ಮುಂತಾದವರು ಉಪಸ್ತಿತರಿದ್ದರು. ಹೆನ್ನಾಬೆಲು ಭುಜಂಗ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೇ,ಹುಣ್ಸಿಡಿ ಗೋವಿಂದ ಶೆಟ್ಟಿ ಸೌಗತಿಸಿ,ವಂದಿಸಿದರು.