ಮಂಗಳೂರು,ಜ. 02: ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವ ಬೈಕಂಪಾಡಿ ಅಡ್ಕಾ ಹಝ್ರತ್ ಶೇಖ್ ಮಹಮೂದ್ ವಲಿಯುಲ್ಲಾ ದರ್ಗಾ ಶರೀಫ್ನಲ್ಲಿ ಉರೂಸ್ ಸಮಾರೋಪ ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದರ್ಗಾವತಿಯಿಂದ ಸಂಸದರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಥಳೀಯರ ಬೇಡಿಕೆಗೆ ಸ್ಪಂದಿಸಿದ ನಳಿನ್ ಕುಮಾರ್ ಕಟೀಲು, ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕೆ.ಐ.ಎ.ಡಿ.ಬಿ. ಕಚೇರಿಯ ಎದುರು ಶಾಲಾ ರಸ್ತೆಯಲ್ಲಿ ರೈಲ್ವೇ ಪಾದಚಾರಿ ಸೇತುವೆ ನಿರ್ಮಿಸಲು ಪರಿಶೀಲನೆ ನಡೆಸುವಂತೆ ರೈಲ್ವೇ ಮಂಡಳಿ ಸಭೆಯಲ್ಲಿ ಸೂಚಿಸುವುದಾಗಿ ತಿಳಿಸಿದರು
ಅಲ್ಲದೆ, ಅಂಗರಗುಂಡಿ-ಎಪಿಎಂಸಿ-ಜುಮಾ ಮಸೀದಿ ರಸ್ತೆಯ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ವನ್ನು ಸಂಸದರ ನಿಧಿಯಿಂದ ನೀಡುವು ದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಜೀಜ್ ಕೃಷ್ಣಾಪುರ, ಸಿರಾಜ್ ಅಂಗರಗುಂಡಿ, ಬೈಕಂಪಾಡಿ ಮಸೀದಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್, ಕಾರ್ಯದರ್ಶಿ ಸೈದುದ್ದೀನ್, ನ್ಯಾಯ ವಾದಿ ಮುಕ್ತಾರ್ ಅಹಮದ್, ಅಹ ಮದ್ ಬಾವಾ ಉಪಸ್ಥಿತರದ್ದರು.