ಕನ್ನಡ ವಾರ್ತೆಗಳು

ಕರಾವಳಿ ಉತ್ಸವ ಜಿಲ್ಲಾಮಟ್ಟದ ರಸ ಪ್ರಶ್ನೆ-2014

Pinterest LinkedIn Tumblr

karvali_ustva_quize_1

ಮಂಗಳೂರು,ಡಿ.26 : ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಮಟ್ಟದ ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನ ರಸಪ್ರಶ್ನೆ ಕಾರ್ಯಕ್ರಮವು ಶುಕ್ರವಾರ ಕೆನರಾ ಹೆಣ್ಮಕ್ಕಳ ಪ್ರೌಢಶಾಲೆಯ ಸುಧೀಂದ್ರ ಸಭಾಭವನದಲ್ಲಿ ನಡೆಯಿತು. ಸನ್ಮಾನ್ಯ ಜಿಲ್ಲಾಧಿಕಾರಿಯವರಾದ ಶ್ರೀ.ಎ.ಬಿ.ಇಬ್ರಾಹಿಂ ಇವರು ದೀಪ ಬೆಳಗಿಸುವುದರ ಮೂಲಕ  ಕಾರ್ಯಕ್ರಮವನ್ನು ಉದ್ಘಾಟಿಸಿ  ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಡಾ.ಕೆ.ವಿ.ರಾವ್ ನಿರ್ದೇಶಕರು, ಪ್ರಾದೇಶಿಕ ವಿಜ್ಞಾನ ಕೇಂದ್ರ, ಪಿಲಿಕುಳ ಇವರು ಪ್ರಾಸ್ತವಿಕ ಭಾಷಣ ಮಾಡಿದರು. ಶ್ರೀ.ವಾಲ್ಟರ್ ಎಚ್.ಡಿ.ಮೆಲ್ಲೊ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕನ್ನಡ, ಮಂಗಳೂರು ಇವರು ಶುಭಾಶಂಸನೆಗೈದರು.

karvali_ustva_quize_3 karvali_ustva_quize_2

ಕೆನರಾಹೆಣ್ಮಕ್ಕಳ ಪ್ರೌಢಶಾಲೆಯ ಸಂಚಾಲಕರಾದ ಶ್ರೀ.ಎಂ.ವಾಮನ್ ಕಾಮತ್‌ರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ.ರಾಧಾಕೃಷ್ಣ ಭಟ್, ವಿಷಯ ಪರಿವೀಕ್ಷಕರು, ಉಪನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಧನ್ಯವಾದ ಸಮರ್ಪಣೆಯನ್ನು ನಡೆಸಿಕೊಟ್ಟರು. ಶ್ರೀ.ಶಿವರಾಮಯ್ಯ, ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಉತ್ತರವಲಯ, ಶ್ರೀ.ಚಂದ್ರಹಾಸ ರೈ, ಸಹಾಯಕ ನಿದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು, ಶ್ರೀಮತಿ ಕೆ.ಸಿ ಲೀಲಾವತಿ, ಮುಖ್ಯ ಶಿಕ್ಷಕಿ, ಕೆನರಾ ಹೆಣ್ಮಕ್ಕಳ ಪ್ರೌಢಶಾಲೆ, ಹಾಗೂ ಕ್ವಿಜ್ ಮಾಸ್ಟರ್‌ಗಳಾದ ಶ್ರೀ.ಅನಿಲ್ ಕುಮಾರ್, ಉಪನ್ಯಾಸಕರು, ಮಹೇಶ ಪದವಿ ಪೂರ್ವ ಕಾಲೇಜು, ಮಂಗಳೂರು, ಶ್ರೀ.ಮಂಜುನಾಥ್, ಪ್ರಾಂಶುಪಾಲರು, ಯೆನಪೋಯ ಸ್ಕೂಲ್, ಜೆಪ್ಪಿನ ಮೊಗರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆನರಾ ಹೆಣ್ಮಕ್ಕಳ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಅರುಣ ಕುಮಾರಿ ಕಾರ್ಯಕ್ರಮವನ್ನು ನಿರ್ವಹಿಸಿದರು.

karvali_ustva_quize_5 karvali_ustva_quize_4

ಅಪರಾಹ್ನ ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಶ್ರೀ.ಬಸ್ತಿ ಪುರುಷೋತ್ತಮ ಶೆಣೈ, ಸಂಚಾಲಕರು, ಕೆನರಾ ಪ್ರಾಥಮಿಕ ಶಾಲೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಶ್ರೀ ಸದಾಶಿವ ಪ್ರಭು ಅಪರ ಜಿಲ್ಲಾಧಿಕಾರಿಗಳು, ದಕ್ಷಿಣಕನ್ನಡ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಬಹುಮಾನ ವಿತರಣೆಗೈದರು. ಡಾ.ಕೆ.ವಿ.ರಾವ್, ನಿರ್ದೇಶಕರು, ಪ್ರಾದೇಶಿಕ ವಿಜ್ಞಾನಕೇಂದ್ರ, ಪಿಲಿಕುಳ, ಶ್ರೀ.ಪುರುಷೋತ್ತಮ, ವಿಷಯ ಪರಿವೀಕ್ಷಕರು, ಉಪನಿರ್ದೇಶಕರ ಕಛೇರಿ, ಶ್ರೀ.ರಾಧಾಕೃಷ್ಣ ಭಟ್ ವಿಷಯ ಪರಿವೀಕ್ಷಕರು, ಉಪನಿರ್ದೇಶಕರ ಕಛೇರಿ, ಶ್ರೀಮತಿ.ಕೆ.ಸಿ.ಲೀಲಾವತಿ ಮುಖ್ಯೋಪಾಧ್ಯಾಯಿನಿ, ಕೆನರಾ ಹೆಣ್ಮಕ್ಕಳ ಪ್ರೌಢಶಾಲೆ, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Write A Comment