ಮಂಗಳೂರು: ಕಳೆದ 25 ವರ್ಷಗಳಿಂದ ಕ್ರೀಡಾ ಬರವಣಿಗೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ಪೇಟೆ ಇವರನ್ನು ಅಖಿಲ ಭಾರತ ಮುಂಡಾಲ ಯುವ ವೇದಿಕೆ ವತಿಯಿಂದ ಸಮ್ಮಾನಿಸಲಾಯಿತು.
ನಗರದ ನೆಹರೂ ಮೈದಾನದಲ್ಲಿ ನಡೆದ ‘ಮುಂಡಾಲ ಸಮ್ಮಿಲನ’ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಅರಣ್ಯ ಪರಿಸರ ಹಾಗೂ ಜೀವಶಾಸ್ತ ಸಚಿವರಾದ ಶ್ರೀ ಬಿ. ರಮಾನಾಥ ರೈಯವರು ಎಸ್. ಜಗದೀಶ್ಚಂದ್ರ ಅಂಚನ್ ಅವರನ್ನು ಮುಂಡಾಲ ಸಮಾಜದ ಸಾಧಕರ ನೆಲೆಯಲ್ಲಿ ಸಮ್ಮಾನಿಸಿದರು. ಇವರು ಬರೆದಿರುವ 2500ಕ್ಕೂ ಹೆಚ್ಚಿನ ಕ್ರೀಡಾ ಲೇಖನಗಳು ವಿವಿಧ ದೈನಿಕಗಳಲ್ಲಿ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಉಪ ಮೇಯರ್ ಶ್ರೀಮತಿ ಕವಿತಾ ವಾಸು, ಕಾರ್ಪೋರೇಟರ್ಗಳಾದ ಕು. ಅಪ್ಪಿ, ಶ್ರೀಮತಿ ನಾಗವೇಣಿ, ಶ್ರೀ ರಜನೀಶ್, ಉಳ್ಳಾಲ ಪುರಸಭೆಯ ಅಧ್ಯಕ್ಷೆ ಶ್ರೀಮತಿ ಗಿರಿಜಾ ಬಾಯಿ, ಕಚ್ಚೂರು ಮಾಲ್ತಿದೇವಿ ಹಾಗೂ ಶ್ರೀ ಬಬ್ಬು ಸ್ವಾಮಿ ಮೂಲಕ್ಷೇತ್ರದ ಗುರಿಕಾರರಾದ ಶ್ರೀ ಎಚ್. ಕಮಲಾಕ್ಷ, ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಅಧ್ಯಕ್ಷರಾದ ಶ್ರೀ ರಘುವೀರ್ ಬಾಬುಗುಡ್ಡೆ, ಮುಂಡಾಲ ಮಹಾಸಭಾದ ಅಧ್ಯಕ್ಷರಾದ ಶ್ರೀ ಟಿ. ಹೊನ್ನಯ್ಯ ಬಾಬುಗುಡ್ಡೆ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.