ಕುಂದಾಪುರ: ನಿತ್ಯ ಮನೆಯಲ್ಲಿ ಪತ್ನಿ ಹಾಗೂ ಪತಿಯೊಂದಿಗೆ ನಡೆಯುತ್ತಿದ್ದ ಕಲಹ ಹಾಗೂ ಕೌಟುಂಬಿಕ ಕಿರಿಕಿರಿಯಿಂದ ಬೇಸತ್ತ ಗ್ರಹಿಣಿಯೋರ್ವರು ವಿಷಯುಕ್ತ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಕೊಲ್ಲೂರು ಸಮೀಪದ ಜಡ್ಕಲ್ ಎಂಬಲ್ಲಿ ಸೋಮವಾರ ನಡೆದಿದೆ.
ಜಡ್ಕಲ್ ನಿವಾಸಿ ಮಿನಿ ಮಾಥ್ಯೂ (28) ಎನ್ನುವವರೇ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಇವರು ಸೆಳ್ಕೋಡು ಸರಕಾರಿ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ವಿವರ: ಮೂಲತಃ ಶಿವಮೊಗ್ಗಾದ ಸೊರಬ ಮೂಲದ ಮ್ಯಾಥ್ಯೂ ಎಂ.ಜೆ. ಎನ್ನುವವರ ಪುತ್ರಿಯಾದ ಈಕೆಯನ್ನು ಕಳೆದ 5 ವರ್ಷಗಳ ಹಿಂದೆ ಜಡ್ಕಲ್ ನಿವಾಸಿ ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್ ಆಗಿರುವ ವಿಲ್ಸನ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಮೈಕಲ್ (5), ಮೆಲ್ವಿನ್ (3) ಹೆಸರಿನ ಇಬ್ಬರು ಮಕ್ಕಳಿದ್ದರು. ಭಾನುವಾರ ರಾತ್ರಿ 8 ಗಂಟೆಗೆ ಫೋಷಕರಿಗೆ ಕರೆ ಮಾಡಿ ತಂದೆಯೊಂದಿಗೆ ಚೆನ್ನಾಗಿಯೇ ಮಾತನಾಡಿದ ಮಿನಿ ಮ್ಯಾಥ್ಯೂ ತಮಗೆ ಸಂಬಳ ಸಿಕ್ಕ ವಿಚಾರವನ್ನು ತಂದೆಯ ಬಳಿ ಹಂಚಿಕೊಂಡಿದ್ದಳೆನ್ನಾಗಿದೆ.
ಆದರೇ ಸೋಮವಾರ ಮಧ್ಯಾಹ್ನದ ಸುಮಾರಿಗೆ ಮನೆಯವರಿಗೆ ಮಗಳು ಸೀರಿಯಸ್ ಎಂಬ ಸುದ್ದಿ ತಲುಪಿದ್ದು ಅವರು ಕುಂದಾಪುರದತ್ತ ಬರುತ್ತಿರುವಾಗ ಮಗಳು ಸಾವನ್ನಪ್ಪಿರುವ ಬಗ್ಗೆ ತಿಳಿದಿದೆ.
ಗಂಡನ ಉಪಟಳ..?: ಮಿನಿ ಮ್ಯಾಥ್ಯೂ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ ಪ್ರಕಾರ ಆಕೆಗೆ ಗಂಡ ವಿಲ್ಸನ್ ನಿತ್ಯ ಉಪಟಳ ನೀಡುತ್ತಿದ್ದು ತಾನೂ ಸಾಯುವ ಬಗ್ಗೆ ಈ ಹಿಂದೆಯೂ ತಂದೆಯ ಬಳಿ ಮಾತನಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಮೃತದೇಹವಿಟ್ಟಿದ್ದ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಭೇಟಿ ನೀಡಿದರು.
ಆಸ್ಪತ್ರೆಯ ವೈದ್ಯಾಧಿಕಾರಿಗಳು ನೀಡಿದ ವರದಿಯಲ್ಲಿ ಬ್ರೋಟ್ ಹೆಡ್ ಎಂದು ತಿಳಿಸಿದ್ದು, ಸಾವಿನ ಬಗ್ಗೆ ಸಂಶಯವಿರುವ ಕಾರಣ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮೃತ ಮಹಿಳೆಯ ತಂದೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.