ಕನ್ನಡ ವಾರ್ತೆಗಳು

ಟಿಪ್ಪರ್ ತಲೆ ಮೇಲೆ ಹರಿದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

Pinterest LinkedIn Tumblr

bajpe_acsident_photo_2

ಮಂಗಳೂರು,ಡಿ.20: ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿನಿ ಗಂಭಿರ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟ ಘಟನೆ ಶನಿವಾರ ಮುಂಜಾನೆ ಬಜಪೆ ಸಮೀಪದ ಸ್ವಾಮಿಲಪದವು ಎಂಬಲ್ಲಿ ನಡೆದಿದೆ.

bajpe_acsident_photo_2bajpe_acsident_photo_3

ಮೃತಳನ್ನು ಬಜಪೆ ಸೈಂಟ್ ಜೋಸೆಫ್ ವಿದ್ಯಾರ್ಥಿನಿ ನಯನ(18) ಎಂದು ಗುರುತಿಸಲಾಗಿದೆ. ನಯನ ಎಂದಿನಂತೆ ಕಾಲೇಜಿಗೆ ಹೊರಟಿದ್ದು ಸ್ನೇಹಿತನ ಆಕ್ಟಿವಾ ಹೊಂಡದಲ್ಲಿ ಹೋಗುತ್ತಿದ್ದ ವೇಳೆ ಸ್ವಾಮಿಲ ಪದವು ತೆರಳುತ್ತಲೇ ಅತಿವೇಗ ಹಾಗೂ ಅಜಾಗರೂಕತೆಯ ಕಾರಣದಿಂದ ಸ್ಕೂಟರ್ ವೇಗ ನಿಯಂತ್ರಣ ಕಳೆದುಕೊಂಡು ನಯನ ರಸ್ತೆ ಎಸೆಯಲ್ಪಟ್ಟು ಅದಾಗಲೇ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ನಯನ ತಲೆಯ ಮೇಲೆ ಹರಿದು ನಯನ ಸ್ಥಳದಲ್ಲೇ ಸ್ಥಾವನ್ನಪ್ಪಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿನಿ ನಯನಾ ಸೈಂಟ್‌ ಜೋಸೆಫ್‌ ಪದವಿ ಪೂರ್ವ ಕಾಲೇಜಿನ ದ್ವಿತೀಯ ವ್ಯಾಣಿಜ ವಿಭಾಗದ ವಿದ್ಯಾರ್ಥಿನಿ.ನಯನಾ ಅವರು ಕೊಳಂಬೆ ಕೌಡೂರಿನ ರಮೇಶ್‌ ಸಫಲಿಗ ಹಾಗೂ ಲೀಲಾವತಿ ದಂಪತಿಯ ಏಕೈಕ ಪುತ್ರಿ. ಕಲಿಕೆಯಲ್ಲಿ ಉತ್ತಮವಾಗಿದ್ದಳು ಎಂದು ಪ್ರಾಂಶುಪಾಲ ಬ್ರದರ್‌ ಹೆಕ್ಟರ್‌ ಪಿಂಟೋ ಪತ್ರಿಕೆಗೆ ತಿಳಿಸಿದ್ದಾರೆ.

ಶೋಕಾರ್ಥವಾಗಿ ಕಾಲೇಜಿನಲ್ಲಿ ಎರಡು ನಿಮಿಷ ಮೌನ ಪ್ರಾರ್ಥನೆ ಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ರಜೆ ನೀಡಲಾಯಿತು.

ನಯನಾ ಕೊಳಂಬೆ ಕಜೆ ಪದವಿನಿಂದ ಬಸ್ಸಿನಲ್ಲಿ ಬರುತ್ತಿದ್ದಳು. ವಾಮದಪದವಿನಿಂದ ಆ್ಯಕ್ಟಿವಾ ಹೊಂಡದಲ್ಲಿ ಬಂದಿದ್ದ ಸಂಬಂಧಿ ಆಶೋಕ್‌ ನಯನಾ ಅವರನ್ನು ಕೊಳಂಬೆ ಕಜೆ ಪದವಿನಲ್ಲಿ ಸ್ಕೂಟರ್‌ನ ಹಿಂಬದಿಯಲ್ಲಿ ಕುಳ್ಳಿರಿಸಿ ಕಾಲೇಜಿಗೆ ಕಡೆಗೆ ಬಂದಿದ್ದರು.ನಯನಾ ಅವರ ಒತ್ತಾಯದ ಮೇರೆ ಸ್ವಾಮಿಲಪದವಿನ ತನಕ ಕೊಂಡು ಹೋಗಿ ಅಲ್ಲಿ ಚಾಕಲೇಟು ತೆಗೆಸಿಕೊಂಡು ವಾಪಸು ಕಾಲೇಜಿನ ಕಡೆಗೆ ಬರುವಾಗ ಹಿಂಬದಿಯಿಂದ ಟಿಪ್ಪರ್‌ ಓವರ್‌ಟೇಕ್‌ ಮಾಡುವ ರಭಸಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ನಿಯಂತ್ರಣ ತಪ್ಪಿ ಹಿಂಬದಿಯಲ್ಲಿ ಕುಳಿತಿದ್ದ ನಯನಾ ರಸ್ತೆಗೆ ಬಿದ್ದಾಗ ಟಿಪ್ಪರ್‌ ನಯನಾ ಅವರ ತಲೆಯ ಮೇಲೆ ಹರಿದು ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರದಲ್ಲಿ ಶವ ಪರೀಕ್ಷೆ ಮಾಡಲಾಯಿತು. ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Write A Comment