ಕುಂದಾಪುರ: ಕಸ್ತೂರಿ ರಂಗನ್ ವರದಿಯನ್ನು ಅವೈಜ್ನಾನಿಕವಾಗಿ ರೂಪಿಸಲಗಿದ್ದು ಇದರ ಅನುಷ್ಟಾನವನ್ನು ವಿರೋಧಿಸಿ ಬೈಂದೂರು ಜಿಲ್ಲಾಪಂಚಾಯತ್ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ನಾಗರೀಕರು ಶುಕ್ರವಾರ ಬೆಳಿಗ್ಗೆ ಬೈಂದೂರಿನಲ್ಲಿ ಬ್ರಹತ್ ಪ್ರತಿಭಟನೆ ನಡೆಸಿದರು.
ಮೊದಲು ಗೋಳಿಹೊಳೆ ಭಾಗದಿಂದ ಸಾಗಿಬಂದ ಬ್ರಹತ್ ವಾಹನ ಜಾಥಾವೂ ಬೈಂದೂರು ತಲುಪಿ ಬೈಂದೂರು ಪೇಟೆಯಿಂದ ಸುಮಾರು 1.5 ಕಿ.ಮೀ. ದೂರದ ಬೈಂದೂರು ವಿಶೇಷ ತಹಶಿಲ್ದಾರ್ ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಳಿಕ ಕಛೇರಿ ಎದುರು ನಡೆದ ಸಭೆಯಲ್ಲಿ ಬೈಂದೂರುಸ್ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಉಪಗ್ರಹಧಾರಿತವಾಗಿ ನಿರ್ಮಿಸಲಾಗಿದ್ದು ಗ್ರಮ ಗ್ರಾಮಗಳಿಗೆ ತೆರಳಿ ಭೌತಿಕ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಬೇಕಿತ್ತು. ಈ ಬಗ್ಗೆ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಈ ತಿಂಗಳಿನಾಂತ್ಯದಲ್ಲಿ ಅರಣ್ಯ ಸಚಿವ ರಮಾನಾಥ ರೈ ಬೈಂದೂರು ಭಾಗಕ್ಕೆ ಆಗಮಿಸಲಿದ್ದು ಅವರನ್ನು ಗ್ರಾಮ ಗ್ರಾಮಕ್ಕೂ ಕರೆದುಕೊಂಡು ಹೋಗಿ ವಸ್ತುಸ್ಥಿಯನ್ನು ಮನವರಿಕೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಬೈಂದೂರು ಕ್ಷೇತ್ರಾಧ್ಯಕ್ಷ ಸುಕುಮಾರ ಶೆಟ್ಟಿ, ಜಿ.ಪಂ. ಸದಸ್ಯ ಬಾಬು ಹೆಗ್ಡೆ, ತಾಲೂಕು ಪಂಚಾಯತ್ ಸದಸ್ಯರಾದ ರಾಜು ಪೂಜಾರಿ, ರಮೇಶ ಗಾಣಿಗ, ರಾಮ ಶೇರಿಗಾರ, ಸ್ಥಳೀಯರಾದ ಭವಾನಿ ಗಾಣಿಗ, ಗ್ರೇಸಿ ಜೋಸೆಫ್, ಸುರೇಶ್, ಪಿ.ಎಲ್. ಜೋಶಿ ಮೊದಲಾದವರು ಉಪಸ್ಥಿತರಿದ್ದರು.