ಕನ್ನಡ ವಾರ್ತೆಗಳು

ನಿವೃತ್ತ ಪೊಲೀಸ್ ಅಧಿಕಾರಿಗಳ ‘ಕ್ಷೇಮಾಭಿವೃದ್ಧಿಯ ನೂತನ ಕಚೇರಿ ಉದ್ಘಾಟನೆ.

Pinterest LinkedIn Tumblr

Retired-Police-1

ಮಂಗಳೂರು,ಡಿ.18: ಜಿಲ್ಲಾ ಪೊಲೀಸ್‌ ಕಚೇರಿ ಆವರಣ ಒಳಗಡೆ ನಿವೃತ್ತ ಪೊಲೀಸ್ ಅಧಿಕಾರಿಗಳ ‘ಕ್ಷೇಮಾಭಿವೃದ್ಧಿಯ ಹೊಸ ಕಚೇರಿಯನ್ನು ಬುಧವಾರ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಶರಣಪ್ಪ ಎಸ್‌.ಡಿ ಉದ್ಘಾಟಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ.ಶರಣಪ್ಪ ಯಾವಾಗಲೂ ನೀವೃತ್ತ ಪೊಲೀಸ್ ಅಧಿಕಾರಿಗಳು ತಮ್ಮ ಸೇವೆ ಸಲ್ಲಿಕೆ ಬಗ್ಗೆ ಗೌರವ  ಮತ್ತು   ಆತ್ಮವಿಶ್ವಾಸ ಇರಬೇಕು. ಪೊಲೀಸರು  ಹಾಗೂ  ಸಾರ್ವಜನಿಕರ ಮಧ್ಯೆ ವಿವಿಧ ವೇದಿಕೆಗಳಲ್ಲಿ ನಡೆಯುವ ಸಂವಾದ ಕಾರ್ಯಕ್ರಮ ಹೆಚ್ಚುತ್ತಿದ್ದರೂ, ಪೊಲೀಸರ ಬಗೆಗಿನ ಕೆಟ್ಟ ಭಾವನೆ ಸಂಫೂರ್ಣವಾಗಿ ಇನ್ನೂ ದೂರವಾಗಿಲ್ಲ. ಕೃಷಿ, ವೈದ್ಯಕೀಯ ಮತ್ತು ಪೊಲೀಸ್‌ ಈ ಮೂರು ಸೇವೆಗಳು ಸಮಾಜದಲ್ಲಿ ಹೆಚ್ಚು ಮಹತ್ವದ್ದಾಗಿವೆ ಎಂದು ಅವರು ಹೇಳಿದರು.

Retired-Police-2

.ಉಡುಪಿ ಜಿಲ್ಲಾ ಮತ್ತು ಅನೇಕ ನಿವೃತ್ತ ಪೊಲೀಸ್ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು .ನಿವೃತ್ತ ಪೊಲೀಸ್‌ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜೆ. ಭಂಡಾರಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಮಂಜುನಾಥ್ ವಂದನೆ ಗೈದರು.

Write A Comment