ಕನ್ನಡ ವಾರ್ತೆಗಳು

ಮುಂಬಯಿ ಕಲಾಭಿಮಾನಿಗಳು ಹೃದಯ ಶ್ರೀಮಂತರು – ಸುರೇಂದ್ರಕುಮಾರ್ ಹೆಗ್ಡೆ

Pinterest LinkedIn Tumblr

mumbai_eswaralii_photo_1

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

ಮುಂಬಯಿ : ಮಂಗಳೂರಿನ ವಿಧಾತ್ರಿ ಕಲಾವಿದರಿಂದ ನ. 27 ರಂದು ಕರ್ನಾಟಕ ಸಂಘ ಮಾಟುಂಗಾದ ಡಾ| ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ’ನಿಕ್ಕ್ ಗೊತ್ತುಂಡಾ …? ತುಳು ನಾಟಕ ಪ್ರದರ್ಶನಗೊಂಡಿದ್ದು ಈ ಸಂದರ್ಭದಲ್ಲಿ ಕಲಾ ಜಗತ್ತು ತಂಡದ ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಮನೋಹರ್ ನಂದಳಿಕೆ ಮತ್ತು ತಂಡದ ಸಂಚಾಲಕ ಪ್ರಕಾಶ್ ಎಂ, ಶೆಟ್ಟಿ ಸುರತ್ಕಲ್ ಇವರನ್ನು ಸನ್ಮಾನಿಸಲಾಯಿತು.

ಮಹಾರಾಷ್ಟ್ರ ಕನ್ನಡಿಗರ ಪರಿಷತ್ ನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಊರಿನಿಂದ ಬಂದ ಕಲಾವಿದರನ್ನು ಸದಾ ಬೆಂಬಲಿಸುತ್ತಿರುವ ಮುಂಬಯಿ ಕಲಾಭಿಮಾನಿಗಳು ಹೃದಯ ಶ್ರೀಮಂತರು ಎಂದರು.

mumbai_eswaralii_photo_3

ಸನ್ಮಾನವನ್ನು ಸ್ವೀಕರಿಸಿದ ವಿಜಯ್ ಕುಮಾರ್ ಶೆಟ್ಟಿಯವರು ಊರಿನಿಂದ ಆಗಮಿಸಿದ ವಿಧಾತ್ರಿ ಕಲಾವಿದರನ್ನು ನಾವು ಸನ್ಮಾನಿಸಬೇಕಿತ್ತು, ಆದರೆ ಇಂದು ಅವರು ನಮ್ಮನ್ನು ಸನ್ಮಾನಿಸಿದ್ದು ಅಭಿಮಾನದ ಸಂಗತಿ ಎಂದರು.

mumbai_eswaralii_photo_2
ರಮೇಶ್ ರೈ ಕುಕ್ಕುವಳ್ಳಿ ಈ ಸಂದರ್ಭದಲ್ಲಿ ಮಾತನಾಡಿ ಕೃತಜ್ನತೆ ಸಲ್ಲಿಸಿದರು.ಅನಿಲ್ ಶೆಟ್ಟಿ, ಕೆ.ಕೆ. ಶೆಟ್ಟಿ, ಅಭಿನಯ ಮಂಟಪದ ಕರುಣಾಕರ ಕಾಪು, ನಟ ಅಶೋಕ್ ಕುಮಾರ್ ಕಾರ್ನಾಡ್, ಕರ್ನೂರು ಮೋಹನ್ ರೈ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ಅದ್ಯಪಾಡಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Write A Comment