ಕನ್ನಡ ವಾರ್ತೆಗಳು

ಅಂತಾರಾಜ್ಯ ದಂತ ವೈದ್ಯಕೀಯ ಸಮಾವೇಶಕ್ಕೆ ಚಾಲನೆ

Pinterest LinkedIn Tumblr

dental_medical_smavesha

ಮಂಗಳೂರು, ನ.29: ಇಂಡಿಯನ್ ಡೆಂಟಲ್ ಆಸೋಸಿಯೇಶನ್ (ಐಡಿಎ) ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡ ಶಾಖೆಯ ಆಶ್ರಯದಲ್ಲಿ ನಗರದ ಅಡ್ಯಾರ್‌ನ ಸಹ್ಯಾದ್ರಿ ಇನ್ಸಿಸ್ಟಿಟ್ಯೂಟ್ ಆ್ ಟೆಕ್ನಾಲಜಿ ಆಡಿಟೋರಿಯಂನಲ್ಲಿ 3 ದಿನಗಳ ಕಾಲ ನಡೆಯುವ ದ್ವಿತೀಯ ಅಂತಾರಾಜ್ಯ ಮತ್ತು 42ನೆ ಕರ್ನಾಟಕ ರಾಜ್ಯ ದಂತ ವೈದ್ಯಕೀಯ ಸಮಾವೇಶಕ್ಕೆ ಶುಕ್ರವಾರ ಚಾಲನೆ ದೊರೆಯಿತು.

ಸಮಾವೇಶವನ್ನು ಉದ್ಘಾಟಿಸಿ ಮಾತ ನಾಡಿದ ಭಾರತೀಯ ದಂತ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ.ದೀಬೆಂದು ಮಜುಂದಾರ್, ದೇಶದಲ್ಲಿ ಗ್ರಾಮೀಣ ಪ್ರದೇಶಗಳು ದಂತ ವೈದ್ಯಕೀಯ ಸೇವೆಯ ಕೊರತೆ ಎದುರಿಸುತ್ತಿದ್ದು ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ದಂತ ವೈದ್ಯರು ಪೂರಕವಾಗಿ ಸ್ಪಂದಿಸಬೇಕು ಎಂದವರು ಸಲಹೆ ನೀಡಿದರು. ಭಾರತೀಯ ದಂತ ವೈದ್ಯಕೀಯ ಮಂಡಳಿ ಉಪಾಧ್ಯಕ್ಷ ಡಾ.ವೈ.ಭರತ್ ಶೆಟ್ಟಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊ ಳಿಸಿದರು. ಐಡಿಎ ಕರ್ನಾಟಕ ರಾಜ್ಯ ಘಟ ಕಾಧ್ಯಕ್ಷ ಡಾ.ಪ್ರಭು ಅಧ್ಯಕ್ಷತೆ ವಹಿಸಿದ್ದರು.

ಟ್ರೇಡ್ ಎಕ್ಸಿಬಿಷನ್‌ನ್ನು ಸಹ್ಯಾದ್ರಿ ಎಜುಕೇಶನಲ್ ಇನ್ಸ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಮಂಜುನಾಥ ಭಂಡಾರಿ ಉದ್ಘಾ ಟಿಸಿದರು. ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ಯು.ಎಸ್.ಕೃಷ್ಣ ನಾಯಕ್ ಸಮಾವೇಶದ ಬಗ್ಗೆ ವಿವರಿಸಿದರು. ಡಾ.ಎಎಂಸಿ ಸಲ್ದಾನ, ಡಾ.ರಂಗನಾಥ್ ವಿ. ಉಪಸ್ಥಿತರಿದ್ದರು. ಸಮಾವೇಶ ಸಂಘಟನಾ ಸಮಿತಿಯ ಅಧ್ಯಕ್ಷ ಡಾ. ಶಿವಶರಣ್ ಶೆಟ್ಟಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಮಂಜುನಾಥ ರೈ ವಂದಿಸಿದರು.

Write A Comment