ಕನ್ನಡ ವಾರ್ತೆಗಳು

ಬಂಟರ ಸಂಘ ವಸಾಯಿ – ಡಹಾಣು ನೂತನ ಪ್ರಾದೇಶಿಕ ಸಮಿತಿಗೆ ಶುಭ ಹಾರೈಕೆ

Pinterest LinkedIn Tumblr

bunts_sanga_mumbai_1

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

ಮುಂಬಯಿ : ನ. 22 ರಂದು ನಲಾಸೋಪಾರ ಗೆಲೆಕ್ಸಿ ಹೋಟೇಲಿನ ಸಭಾಂಗಣದಲ್ಲಿ ಬಂಟರ ಸಂಘ ವಸಾಯಿ – ಡಹಾಣು ಇದರ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬಂಟರ ಸಂಘ ದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಮಾತನಾಡುತ್ತಾ ವಸಾಯಿ ಪರಿಸರದಿಂದ ತನ್ನ ವೃತ್ತಿಪರ ಜೀವನ ಪ್ರಾರಂಭಗೊಂಡಿದ್ದು, ಶ್ರದ್ದೆ ಮತ್ತು ನಿಷ್ಥೆಯಿಂದ ಸಮಾಜ ಸೇವೆ ಮಾಡುತ್ತಾ ಇಂದು ಅಧ್ಯಕ್ಷನಾಗಿ ಇಲ್ಲಿ ಬಂದಿರುವೆನು ಎನ್ನುತ್ತಾ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.

bunts_sanga_mumbai_2 bunts_sanga_mumbai_3

ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಆಗಮಿಸಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮುಂಡಪ್ಪ ಪಯ್ಯಡೆ, ಪ್ರಧಾನ ಕಾರ್ಯದರ್ಶಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಸಿಎ ಐ. ಆರ್. ಶೆಟ್ಟಿ, ನಿರ್ಗಮನ ಕಾರ್ಯಾಧ್ಯಕ್ಷ ಕರ್ನಿರೆ ಶ್ರೀಧರ ಶೆಟ್ಟಿ, ಜಯಂತ್ ಪಕ್ಕಳ, ಲತಾ ಜಯರಾಮ ಶೆಟ್ಟಿ, ಮಂಜುಳಾ ಶೆಟ್ಟಿ, ಮುಂಡ್ಕೂರು ರತ್ನಾಕರ ಶೆಟ್ಟಿ, ವಿಶ್ವನಾಥ ಪಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

bunts_sanga_mumbai_6 bunts_sanga_mumbai_4 bunts_sanga_mumbai_5
ಪ್ರಾದೇಶಿಕ ಸಮಿತಿಯ ನೂತನ ಕಾರ್ಯಧ್ಯಕ್ಷರಾಗಿ ಆಯ್ಕೆಗೊಂಡ ಶಶಿಧರ ಕೆ. ಶೆಟ್ಟಿ ಯವರನ್ನು ಗಣ್ಯರು ಪುಷ್ಫಗುಚ್ಚ ನೀಡಿ ಅಭಿನಂದಿಸಿದರು. ನೂತನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ನಿರೂಪಿಸಿದ್ದು, ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು.

Write A Comment