ಕನ್ನಡ ವಾರ್ತೆಗಳು

ಚಿನ್ನಾಭರಣ ಕದ್ದು ಮನೆ ಮಾಲಿಕನಿಗೆ ಕೊರಿಯರ್ ಮಾಡಿದ ಸ್ಪೆಷಲ್ ಕಳ್ಳ..

Pinterest LinkedIn Tumblr

courier_service_photo

ಮೈಸೂರು,ನ.26: 50 ರೂಪಾಯಿಗಾಗಿ ಕೊಲೆ ನಡೆಯುವ ಕಾಲವಿದು. ಆದರೆ ಮೈಸೂರಿನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಮೈಸೂರಿನ ಟಿ.ಕೆ. ಲೇಔಟ್​ ನಿವಾಸಿ ನಂಜುಂಡಸ್ವಾಮಿ ಅವರ ಮನೆಯಲ್ಲಿ ಕಳೆದ ನವೆಂಬರ್ 2 ರಂದು ಕಳ್ಳತನವಾಗಿತ್ತು. ಸುಮಾರು 223 ಗ್ರಾಂ ಚಿನ್ನ ಮತ್ತು 1 ಕೆ.ಜಿ ಬೆಳ್ಳಿ ನಾಪತ್ತೆಯಾಗಿತ್ತು. ಆ ಕುರಿತು ಅವರು ಪೊಲೀಸ್ ಠಾಣೆಯಲ್ಲೂ ಸಹ ದೂರು ದಾಖಲಿಸಿದ್ದರು.

ತಾವು ಕಳೆದುಕೊಂಡ ಚಿನ್ನಾಭರಣಗಳನ್ನು ತಾವೆಂದು ಸಹ ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ನಂಜುಂಡಸ್ವಾಮಿಯವರು ಅಂದುಕೊಂಡಿರಬೇಕು. ಆದರೆ ಅವರು ಊಹಿಸದಂತ ರೀತಿಯಲ್ಲಿ ಚಿನ್ನಾಭರಣ ಮರಳಿ ಅವರ ಮನೆಗೆ ತಲುಪಿದೆ.

ಇತ್ತೀಚೆಗೆ ನಂಜುಂಡ ಸ್ವಾಮಿ ಅವರ ವಿಳಾಸಕ್ಕೆ ಒಂದು ಕೋರಿಯರ್​ ಬಂದಿತ್ತು. ಕಳುಹಿಸಿದವರ ವಿಳಾಸ ಇಲ್ಲದ ಕೊರಿಯರ್‌ನ್ನು ಕುತೂಹಲದಿಂದ ತೆರೆದ ಅವರಿಗೆ ಆಶ್ಚರ್ಯ ಕಾದಿತ್ತು. ಅದರಲ್ಲಿ ಕಳುವಾಗಿದ್ದ ಚಿನ್ನಾಭರಣಗಳಿದ್ದವು. ಅದರ ಜತೆ ಇಂಗ್ಲಿಷ್​ನಲ್ಲಿ ಬರೆದ ಪತ್ರ ಕೂಡ ಇತ್ತು.

ಪತ್ರದಲ್ಲಿ ಕಳುವು ಮಾಡಿದ್ದಕ್ಕೆ ಕ್ಷಮೆ ಕೋರಿರುವ ಕಳ್ಳ, ಇನ್ನುಳಿದ ಚಿನ್ನಾಭರಣಗಳನ್ನು ಸದ್ಯದಲ್ಲೇ ಮರಳಿಸುವುದಾಗಿ ಕೇಳಿಕೊಂಡಿದ್ದಾನೆ. ಚಿನ್ನಾಭರಣಗಳನ್ನು ಮರಳಿಸಿದ್ದಲ್ಲದೇ ಇಂಗ್ಲಿಷ್​ನಲ್ಲಿ ಪತ್ರ ಬರೆಯುವುದರ ಮೂಲಕ ಆತ ಎಲ್ಲರಿಗೆ ಅಚ್ಚರಿ ಮೂಡಿಸಿದ್ದಾನೆ.

Write A Comment