ಕನ್ನಡ ವಾರ್ತೆಗಳು

160 ರೈಲ್ವೆ ಯೋಜನೆ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ.

Pinterest LinkedIn Tumblr

TRAIN1_2210690g

ಬೆಂಗಳೂರು,ನ.25: ರಾಜ್ಯದ 14 ರೇಲ್ವೆ ಯೋಜನೆಗಳು ಸೇರಿದಂತೆ ದೇಶಾದ್ಯಂತ ಒಟ್ಟು 160 ಯೋಜನೆಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  ಯೋಜನೆಗಳ ಲಾಭಕರವಾಗಿರುವ ಕಡೆಗಳೆಲ್ಲ ಸ್ಥಗಿತದ ನಿರ್ಧಾರ ಕೈಗೊಳ್ಳಲಾಗಿದೆ. ರೈಲ್ವೆ ಇಲಾಖೆಗೆ ಈ ಯೋಜನೆಗಳಿಂದ ಭಾರಿ ನಷ್ಟವಾಗುತ್ತಿದೆ. ಆ ಕಾರಣ ಈ ಯೋಜನೆಗಳನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಸರ್ಕಾರದ ಈ ನಿರ್ಧಾರದಿಂದ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ತಲಾ 14 ಯೋಜನೆಗಳನ್ನು ಕಳೆದುಕೊಳ್ಳಲಿವೆ. ಬೆಂಗಳೂರು-ಸತ್ಯಮಂಗಲಂ, ಕೋಟಿಪಲ್ಲಿ-ನರಸಾಪುರ, ತುಮಕೂರು-ರಾಯದುರ್ಗ,ತುಮಕೂರು-ಚಿತ್ರದುರ್ಗ-ದಾವಣಗೆರೆ, ಹರಿಹರ-ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ 14 ಯೋಜನೆಗಳು ನಿಲುಗಡೆಗೊಳ್ಳಲಿವೆ.  ಈ ಯೋಜನೆಗಳಿಂದ ಕೇವಲ ನಷ್ಟವಾಗುತ್ತಿದ್ದು, ಸರಕಾರಕ್ಕೆ ಅನಾವಶ್ಯಕ ಹೊರೆಯಾಗಿವೆ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Write A Comment