ಕನ್ನಡ ವಾರ್ತೆಗಳು

‘ಕಿಸ್ ಆಫ್ ಲವ್’ ಹೆಸರಿನಲ್ಲಿ ನಡೆಯುವ ಅನೈತಿಕತೆಗೆ ಕಡಿವಾಣ ಹಾಕಿ !

Pinterest LinkedIn Tumblr

kiss_of_love-campaign_0_0_0

ಬೆಂಗಳೂರು,ನ.24 : ಭಾರತವು ಸುಸಂಸ್ಕ ತ ದೇಶವಾಗಿದೆ. ಸೀತೆ, ದ್ರೌಪದಿಯರಂತಹ ಅತ್ಯುಚ್ಚ ಸ್ತ್ರೀಯ ಆದರ್ಶವಿರುವ ಈ ದೇಶಕ್ಕೆ ಇಂದು ಮಾತ್ರ ಪಾಶ್ಚಾತ್ಯ ಡೆ ಗಳ ಕುಸಂಸ್ಕ ತಿಯ ಗ್ರಹಣ ಹಿಡಿದಿದೆ. ಈಗ ಕಿಸ್ ಆಫ್ ಲವ್ ಎಂಬ ಹೆಸರು ಇದರಲ್ಲಿ ಸೇರ್ಪಡೆಯಾಗಿದ್ದು ಇದು ಅನೈತಿಕತೆಯ ಪರಾಕಾಷ್ಠೆ ಎನ್ನಬಹುದು. ಸರಕಾರ ಹಾಗೂ ಆರಕ್ಷಕರು ಇಂತಹ ಕುಲೀನ ಡೆಗಳನ್ನು ಆಚರಿಸಲು ಬೆಂಗಳೂರಿನಲ್ಲಿ ಆಚರಿಸಲು ಅವಕಾಶ ಕೊಡಬಾರದೆಂದು ಹಿಂದೂ ಜನಜಾಗೃತಿ ಸಮಿತಿಯು ಈ ಮೂಲಕ ಆಗ್ರಹಿಸುತ್ತದೆ ಎಂದು. ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಪ್ರಕತನೆಯಲ್ಲಿ ತಿಲಿಸಿದ್ದರೆ.

ವಿದೇಶಿಯರೂ ಭಾರತೀಯ ಸಂಸ್ಕ ತಿಯನ್ನು ಮೆಚ್ಚಿ ಭಾರತಕ್ಕೆ ಬಂದು ಇಲ್ಲಿ ನೆಲೆಸಿ ಇದನ್ನು ಅಂಗೀಕರಿಸಿದ ಅನೇಕ ಉದಾಹರಣೆಗಳಿವೆ. ಇದೆಕ್ಕೆಲ್ಲ ಕಾರಣ ಭಾರತದ ಪ್ರಾಚೀನ ಸುಸಂಸ್ಕ ತ ಪರಂಪರೆ! ಆದರೆ ಇಂದು ಇಂತಹ ಪರಂಪರೆಗೆ ಕಳಂಕ ತರುವಂತಹ ಕೃತ್ಯಗಳು ನಡೆಯುತ್ತಿದ್ದು ಇದರಿಂದ ಭಾರತೀಯರಿಗೆ ತಲೆ ತಗ್ಗಿಸುವಂತಹ ಪ್ರಮೇಯ ಎದುರಾಗಿದೆ.

ಇಂದು ಕಿಸ್ ಆಫ್ ಲವ್ ಹೆಸರಿನಲ್ಲಿ ನಡುರಸ್ತೆಯಲ್ಲಿ ಚುಂಬಿಸುವುದು ಕಾಮಪ್ರಚೋದಕವಾಗಿದ್ದು ಈ ಮೂಲಕ ಸಮಾಜದ ನೈತಿಕತೆಗೆ ಧಕ್ಕೆ ತರುತ್ತಿದೆ. ಕೇರಳದಲ್ಲಿ ಆದ ಯಾವುದೋ ಘಟನೆಗೆ ಇದು ಖಂಡಿಸುವ ಮಾರ್ಗವೂ ಅಲ್ಲ. ಈಗಾಗಲೇ ಚಲನಚಿತ್ರದಂತಹ ಮಾಧ್ಯಮಗಳಿಂದ ಪ್ರಭಾವಿತರಾಗಿ ಆಗುತ್ತಿರುವ ಕುಕೃತ್ಯಗಳಿಂದಾಗಿ ಬಾಲಕರೂ ಅನೈತಿಕ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬರುತ್ತಿದೆ.

ಅಲ್ಲದೇ ಇಂದು ರಾಜ್ಯದೆಲ್ಲೆಡೆ ಬಲಾತ್ಕಾರದ ಒಂದರನಂತರ ಒಂದು ಘಟನೆಗಳಾಗುತ್ತಿರುವಾಗ ಇಂತಹ ಅನೈತಿಕ ಕೃತ್ಯವು ಅದಕ್ಕೆ ಇನ್ನೂ ಪುಷ್ಟಿ ನೀಡುವುದು ಎಂಬುದರಲ್ಲಿ ಸಂದೇಹವಿಲ್ಲ. ಅಲ್ಲದೇ ಇಂತಹದ್ದರಿಂದ ಏನಾದರೂ ಅನಾಹುತಗಳಾದರೆ ಅದಕ್ಕೆ ಸರಕಾರ ಹಾಗೂ ಆರಕ್ಷಕ ಇಲಾಖೆಯೇ ಪೂರ್ಣ ಹೊಣೆಯಾಗುವುದು ಎಂದು ಈ ಮೂಲಕ ಎಚ್ಚರಿಯಸುತ್ತಿರುವುದಾಗಿ ಅವರು ಹೆಲಿದ್ದಾರೆ.

Write A Comment