ಕನ್ನಡ ವಾರ್ತೆಗಳು

ಬೋಟ್‌ನೊಳಗೆ ಬಿದ್ದು ಮೀನುಗಾರ ಸಾವು

Pinterest LinkedIn Tumblr

boat.

 

(ಸಾಂದರ್ಭಿಕ ಚಿತ್ರ)

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಯುವಕನೊಬ್ಬ ಬೋಟ್‌ನೊಳಗೆ ಬಿದ್ದು ಗಾಯಗೊಂಡು ಮೃತಪಟ್ಟಿದ್ದಾರೆ.

ಭಟ್ಕಳ ತಾಲೂಕು ಹಡ್ಡೀನ ಗ್ರಾಮ ಬಣಸಾಲಿ ಮನೆ ವೆಂಕಟರಮಣ ನಾಯ್ಕರ ಅತ್ತಿಗೆಯ ಮಗ ಗಣೇಶ್ ಎಂ. ನಾಯ್ಕ ಮೃತರು.

ಅವರು ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಕಾಲು ಜಾರಿ ಬೋಟ್ ಒಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment