ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ‘ದಲಿತರ ಮನೆಯ ಊಟ’ ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ದಲಿತರ ಮನೆಯಲ್ಲಿ ಊಟದ ಹೆಸರಿನಲ್ಲಿ ಬ್ರಾಂಡೆಡ್ ನೀರು, ಟೀ ಪೌಡರ್ ತರಿಸುವ ಮೂಲಕ ಅವರಿಗೆ ಅವರಿಗೆ ಅವಮಾನಿಸಲಾಗಿದೆ. ಇದಕ್ಕಾಗಿಯೇ ಪೇ ಸಿಎಂ ದಲಿತರ ಮನೆಗೆ ಹೋದ್ರ ಎಂದು ಪ್ರಶ್ನಿಸಲಾಗಿದೆ.
'@BJP4Karnataka ಪ್ರಕಾರ,
◆ದಲಿತರ ಹಿತ ಬೇಡ
◆ದಲಿತರ ಏಳಿಗೆ ಬೇಡ
◆ದಲಿತರಿಗೆ ಸಮಾನತೆ ಬೇಡ
◆ದಲಿತರಿಗೆ ಅಧಿಕಾರ ಬೇಡ
◆ದಲಿತರ ನಿಗಮಗಳಿಗೆ ಹಣ ಕೊಡುವುದು ಬೇಡ
◆ದಲಿತರಿಗೆ ಶಿಕ್ಷಣ ಬೇಡ
◆ದಲಿತರಿಗೆ ರಕ್ಷಣೆ ಬೇಡ
◆ದಲಿತರಿಗೆ ವಿದ್ಯಾರ್ಥಿ ವೇತನ ಬೇಡ❗️ದಲಿತರ ಮನೆಯ ಊಟವೂ ಬೇಡ❗️ಅದು ಬಿಜೆಪಿಗೆ ಮೈಲಿಗೆ!
ದಲಿತರ ಮತ ಮಾತ್ರ ಬೇಕೇ?
— Karnataka Congress (@INCKarnataka) October 13, 2022
ಮುಖ್ಯಮಂತ್ರಿಗಳ 'ದಲಿತರ ಮನೆಯ ಊಟ' ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ.
ಬಿಜೆಪಿಗೆ ದಲಿತರ ಮನೆಯ ಊಟ ಅವಮಾನಕರವಾಗಿತ್ತು, ಈಗ ಅನುಮಾನಕರವಾಗಿದೆ.
ದಲಿತರನ್ನು ಅವಮಾನಿಸಲೆಂದೇ ದಲಿತರ ಮನೆಗೆ ಹೋದ್ರ #PayCM @BSBommai ಅವರೇ?
ದಲಿತರೆಂದರೆ ಅಷ್ಟೊಂದು ಅನುಮಾನವೇ ಬಿಜೆಪಿಗೆ?#BharatJodoYatra pic.twitter.com/2T5yeXovua— Karnataka Congress (@INCKarnataka) October 13, 2022
ಬಿಜೆಪಿಗೆ ದಲಿತರ ಮನೆಯ ಊಟ ಅವಮಾನಕರವಾಗಿತ್ತು, ಈಗ ಅನುಮಾನಕರವಾಗಿದೆ. ಬಿಜೆಪಿಗೆ ದಲಿತರೆಂದರೆ ಅಷ್ಟೊಂದು ಅನುಮಾನವೇ? ಎಂದು ಕೇಳಿದೆ. ದಲಿತರ ಹಿತಬೇಡ, ಅವರ ಏಳಿಗೆ, ಸಮಾನತೆ, ಅಧಿಕಾರ, ದಲಿತರ ನಿಗಮಗಳಿಗೆ ಹಣ, ಶಿಕ್ಷಣ, ರಕ್ಷಣೆ, ವಿದ್ಯಾರ್ಥಿ ವೇತನ ಬೇಡ. ದಲಿತರ ಮತ ಮಾತ್ರ ಬೇಕೆ? ಎಂದು ಮತ್ತೊಂದು ಟ್ವೀಟ್ ನಲ್ಲಿ ಪ್ರಶ್ನೆ ಮಾಡಲಾಗಿದೆ.
Comments are closed.