ಕರಾವಳಿ

ಪ್ರವೀಣ್ ನೆಟ್ಟಾರು ಹತ್ಯೆ: ಸಚಿವ ಕೋಟ ಊರಿನಲ್ಲೇ ಯುವಮೋರ್ಚಾ ಅಧ್ಯಕ್ಷ ಸುಶಾಂತ್ ಶೆಟ್ಟಿ ರಾಜಿನಾಮೆ.!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳಿಂದ ಕೊಲೆಯಾದ ಬಗ್ಗೆ ಬಿಜೆಪಿ ಕೋಟ ಯುವಮೊರ್ಚ ಅಧ್ಯಕ್ಷ ಸ್ಥಾನಕ್ಕೆ ಸುಶಾಂತ್ ಶೆಟ್ಟಿ ರಾಜಿನಾಮೆ ಘೋಷಿಸಿ ಪ್ರಕಟಣೆ ನೀಡಿದ್ದಾರೆ.

ಸಚಿವ ಶ್ರೀನಿವಾಸ ಪೂಜಾರಿಯವರ ಕ್ಷೇತ್ರದಲ್ಲೆ ಯುವ ಸಂಘಟಕ, ಕೋಟ ಯುವಮೊರ್ಚಾ ಅಧ್ಯಕ್ಷ ಕೊಲೆ ವಿಚಾರದಲ್ಲಿ ಮನ‌ನೊಂದು ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಪಕ್ಷ ಹಾಗೂ ಸಂಘಟನೆಗಾಗಿ ಕೆಲಸ ಮಾಡುತ್ತಿರುವರನ್ನು ಕೊಲೆ ಮಾಡುತ್ತಿದ್ದರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ರಾಜ್ಯ ಸರ್ಕಾರದವರು ಕಠಿಣ ಕ್ರಮ ಎಂಬ ಪೊಳ್ಳು ಭರವಸೆ ನೀಡಿ ಆರೋಪಿಗಳನ್ನು‌ ಬಂಧಿಸಿದಂತೆ ಮಾಡಿದರೂ‌ಕೂಡ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ. ಹಿಂದೆ ಹಲವರು.. ಇಂದು ಪ್ರವೀಣ್…ನಾಳೆ ಸಾಲಿನಲ್ಲಿ ನಮ್ಮ‌ ಸಹಿತ ಮತ್ತೊಬ್ಬರು ಎನ್ನುವಂತಾಗಿದೆ. ನಿರಂತರವಾಗಿ ನೋವು ಪಡುತ್ತಿದ್ದೇವೆ…ಅದಕ್ಕಾಗಿ ಈ ರಾಜಿನಾಮೆ ತೀರ್ಮಾನ ಎಂದು ಅವರು ಹೇಳಿದ್ದಾರೆ.

Comments are closed.