ಉಡುಪಿ: ಕಳೆದ ಕೆಲ ವರ್ಷಗಳಿಂದ ಉಡುಪಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಪ್ರಿಯಾಂಕ ಮೇರಿ ಪ್ರವಾಸೋದ್ಯಮ ಇಲಾಖಾ ನಿರ್ದೇಶಕಿಯಾಗಿ ವರ್ಗಾವಣೆಗೊಂಡಿದ್ದು ಉಡುಪಿಗೆ ನೂತನ ಜಿಲ್ಲಾಧಿಕಾರಿಯಾಗಿ ಹೆಪ್ಸಿಭಾ ರಾಣಿಯವರನ್ನು ನಿಯುಕ್ತಿಗೊಳಿಸಲಾಗಿದೆ. ಇವರು ಈ ಹಿಂದೆ ಹುಬ್ಬಳ್ಳಿ ದಾರವಾಡ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್.ಪಿ.ವಿ.) ಇದರ ಎಂ.ಡಿ ಆಗಿದ್ದರು.ಅದಕ್ಕೂ ಮೊದಲು ಮಂಗಳೂರು ನಗರಪಾಲಿಕೆ ಆಯುಕ್ತೆಯಾಗಿದ್ದರು.
(ಹೆಫ್ಸಿಬಾ ರಾಣಿ, ನೂತನ ಜಿಲ್ಲಾಧಿಕಾರಿ)
ಡಿಸಿ ಪ್ರಿಯಾಂಕ ಮೇರಿ ಪ್ರಾಸ್ಸಿಸ್ ಮೂಲತಃ ಕೇರಳದವರಾಗಿದ್ದು 2009 ಬ್ಯಾಚ್ ಐಎಎಸ್ ಅಧಿಕಾರಿ. 2017 ಫೆಬ್ರವರಿ ತಿಂಗಳಿನಲ್ಲಿ ಜಿಲ್ಲಾಧಿಕಾರಿ ಅಧಿಕಾರ ಸ್ವೀಕರಿಸಿದ್ದರು. ಅಕ್ರಮ ಮರಳುಗಾರಿಕೆ ವಿರುದ್ದ ಸಮರ ಸಾರಿದ್ದ ಡಿಸಿ ಮೇಲೆ ಕುಂದಾಪುರ ತಾಲೂಕಿನ ಕಂಡ್ಲೂರು ಭಾಗದಲ್ಲಿ ಹಲ್ಲೆ ಯತ್ನ ನಡೆದಿತ್ತು. ಇದು ದೇಶಾದ್ಯಂತ ಬಿರುಸಿನ ಚರ್ಚೆಗೆ ಕಾರಣವಾಗಿತ್ತು.
Comments are closed.