
ಮಂಗಳೂರು, ಮಾರ್ಚ್.3: ಲಾರಿ ಚಾಲಕರಿಬ್ಬರ ಮಧ್ಯೆ ಕ್ಷುಲ್ಲಕ್ಕೆ ಕಾರಣಕ್ಕಾಗಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಗರದ ಹೊರವಲಯದ ಪಡೀಲ್ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ತಮಿಳುನಾಡು ಮೂಲದ ಲಾರಿ ಚಾಲಕ ಸೆಲ್ವಮಣಿ (38) ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿ ತಮಿಳುನಾಡು ಮೂಲದ ಇನ್ನೊಂದು ಲಾರಿಯ ಚಾಲಕ ಪೆಟ್ರೋಲ್ ಸುರೇಶ್ ಅಲಿಯಾಸ್ ಸುರೇಶ್ ಕುಮಾರ್ (49) ಎಂಬಾತನನ್ನು ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಆರೋಪವನ್ನು ಒಪ್ಪಿದ್ದಾನೆ ಎಂದು ಹೇಳಲಾಗಿದೆ.

ಪಡೀಲ್ ಬಳಿ ನಿರ್ಮಿಸಲಾದ ನೂತನ ರೈಲ್ವೆ ಸೇತುವೆ ಸಮೀಪದಲ್ಲಿ ಈ ಹತ್ಯೆ ನಡೆದಿದೆ. ಕ್ಷುಲ್ಲಕ್ಕೆ ಕಾರಣಕ್ಕಾಗಿ ಸೆಲ್ವಮಣಿ ಹಾಗೂ ಸುರೇಶ್ ಕುಮಾರ್ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಇಬ್ಬರ ನಡುವೆ ಉಂಟಾದ ಹೊಯ್ ಕೈ ವೇಳೆ ಆರೋಪಿ ಸುರೇಶ್ ಸೆಲ್ವಮಣಿಯನ್ನು ಸ್ಕ್ರೂ ಡ್ರೈವರ್ ನಿಂದ ತಿವಿದು ಕೊಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Comments are closed.