ಮನೋರಂಜನೆ

ಬನ್ಸಾಲಿ ಚಿತೆಗೆ ಬೆಂಕಿ ಇಡುತ್ತೇವೆ: ರಜಪೂತ್ ಮಹಿಳೆಯರ ಆಕ್ರೋಶ

Pinterest LinkedIn Tumblr


ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ಬಿಡುಗಡೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಆದರೂ ಚಿತ್ರಕ್ಕೆ ಹಲವಾರು ಅಡ್ಡಿಆತಂಕಗಳು ತಪ್ಪಿಲ್ಲ. ಈ ಸಿನಿಮಾ ಬಿಡುಗಡೆ ಮಾಡಿದರೆ ನಿರ್ದೇಶಕರು ಜೌಹಾರ್ (ಆಹ್ಮಾಹುತಿ) ಮಾಡಿಕೊಳ್ಳಬೇಕೆಂದು, ಆಗ ಅವರ ಚಿತೆಗೆ ನಾವೇ ಅಗ್ನಿಸ್ಪರ್ಶ ಮಾಡುತ್ತೇವೆ ಎಂದು ರಜಪೂತ್ ಮಹಿಳೆಯರು ಎಚ್ಚರಿಸಿದ್ದಾರೆ.

ಈ ಸಿನಿಮಾ ಬಿಡುಗಡೆ ಮಾಡಿದರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಈ ಹಿಂದೆ ಕ್ಷತ್ರಿಯ ಸಮುದಾಯದ ಮಹಿಳೆಯರು ಪ್ರತಿಭಟನೆ ಮಾಡಿದ್ದರು. ಸೆನ್ಸಾರ್ ಅನುಮತಿ ನೀಡಿದ್ದರು ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಎಂದು ನಾಲ್ಕು ರಾಜ್ಯಗಳು ಪ್ರಕಟಿಸಿದ್ದವು. ಈ ಬಗ್ಗೆ ಬುಧವಾರ ಚಿತ್ರ ನಿರ್ಮಾಪಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹಾಗಾಗಿ ಚಿತ್ರದ ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು. ಸಿನಿಮಾ ನಿಷೇಧಿಸಬೇಕೆಂದು ಮತ್ತೊಮ್ಮೆ ಕರ್ಣಿಸೇನೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಈ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ.

ಪದ್ಮಾವತ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ರಣವೀರ್ ಸಿಂಗ್ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದು ರಜಪೂತರ ರಾಣಿ ಪದ್ಮಿನಿ ಜೀವನ ಆಧಾರವಾಗಿ ತೆರೆಗೆ ತರುತ್ತಿರುವ ಭಾರಿ ಬಜೆಟ್‍ ನಿರ್ಮಾಣದ ಚಿತ್ರ ಜ.25ರಂದು ಬಿಡುಗಡೆಯಾಗುತ್ತಿದೆ.

Comments are closed.