ಕರ್ನಾಟಕ

ಬಿಜೆಪಿ ಕಾರ್ಯಕರ್ತರ ಮಾರಾಮಾರಿ, ಜೋರಾದ ಭಿನ್ನಮತ

Pinterest LinkedIn Tumblr


ತರಿಕೇರೆ: ಬಿಜೆಪಿ ರಾಜ್ಯಾಧ್ಯಕ್ಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಪರಿವರ್ತನಾ ಯಾತ್ರೆಗೆ ಸ್ವಾಗತ ಕೋರುವ ಬ್ಯಾನರ್ ಹಾಕುವ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಇದರಿಂದ ಭಿನ್ನಮತ ತೀವ್ರಗೊಂಡಿದೆ.

ತರಿಕೇರೆ ಕ್ಷೇತ್ರದಲ್ಲಿ ಜನವರಿ 2ರಂದು ಪರಿವರ್ತನಾ ಯಾತ್ರೆ ನಡೆಯಲಿದ್ದು, ಬಿ.ಎಸ್.ಯಡಿಯೂರಪ್ಪ ಬರಲಿದ್ದಾರೆ. ಆದ್ದರಿಂದ ಯಾತ್ರೆಗೆ ಸ್ವಾಗತ ಕೋರಲು ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದೇ ವಿಷಯದಲ್ಲಿ ಮಾಜಿ ಶಾಸಕ ತರಿಕೆರೆ ಸುರೇಶ ಹಾಗೂ ಮುಂಬರುವ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋಪಿಕೃಷ್ಣ ನಡುವೆ ಭಿನ್ನಮತ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯಲು ಕಾರಣವಾಗಿದೆ.

ಗೋಪಿಕೃಷ್ಣ ಕಡೆಯವರು ಅಳವಡಿಸಿದ್ದ ಬ್ಯಾನರ್‌ಗಳನ್ನು ರಾತ್ರೋ ರಾತ್ರಿ ಹರಿದು ಹಾಕಲಾಗಿದೆ. ಇದಕ್ಕೆ ಮಾಜಿ ಶಾಸಕ ಸುರೇಶ ಅವರೇ ಕಾರಣರಾಗಿದ್ದ ಎನ್ನುವ ಆರೋಪ ಕೇಳಿಬಂದಿದೆ.

Comments are closed.