ಕರ್ನಾಟಕ

ಸಂವಿಧಾನ ಬದಲಾವಣೆ ಬಗ್ಗೆ ಕ್ರಿಮಿಗಳು ಮಾತನಾಡುತ್ತಿವೆ: ದ್ವಾರಕನಾಥ್

Pinterest LinkedIn Tumblr


ಚಾಮರಾಜನಗರ: ಸಂವಿಧಾನದ ಬದಲಾವಣೆ ಬಗ್ಗೆ ಕ್ರಿಮಿಕೀಟಗಳು ಮಾತನಾಡುತ್ತಿವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕನಾಥ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಕೋರೆಗಾಂವ್ ವಿಜಯೋತ್ಸವ 200 ವರ್ಷಗಳು…ಮುಂದೇನು..? ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಐದಾರು ಬಾರಿ ಸಂಸದನಾಗಿರುವ ಅನಂತ್ ಕುಮಾರ್ ಹೆಗಡೆ ಓರ್ವ ಮೂರ್ಖ. ಆತನಿಗೆ ಸಂವಿಧಾನ ಗೊತ್ತಿದ್ದೆಯಾ?.. ಎಂದಾದರೂ ಸಂವಿಧಾನ ಓದಿದ್ದಾನಾ?..ಸಂವಿಧಾನದ ಪುಸ್ತಕ ಮುಟ್ಟುವುದಕ್ಕು ಅಸ್ಪೃಶ್ಯತೆ ಆಚರಿಸುವ ವ್ಯಕ್ತಿ. ಸಂವಿಧಾನದಿಂದಲೇ ಆತ ಕೇಂದ್ರ ಸಚಿವನಾಗಿದ್ದು, ಇಲ್ಲದಿದ್ದರೆ ಕಾರವಾರದಲ್ಲಿ ಪೌರೋಹಿತ್ಯ ಮಾಡಿಕೊಂಡಿರುತ್ತಿದ್ದ. ಆತ ಹೆಗಡೆಯಲ್ಲ, ಹೆಗ್ಗಣ ಎಂದು ಜರಿದರು.

ಅಂಬೇಡ್ಕರ್ ಸಂವಿಧಾನ ಸರೆದಿದ್ದು ಕೇವಲ ಎಸ್‌ಸಿ, ಎಸ್‌ಟಿ ಜನಾಂಗಕಲ್ಲ. ಹಿಂದುಳಿದವರಿಗೂ ಸಂವಿಧಾನ ಬರೆದಿದ್ದಾರೆ. ಆದರೆ, ಹಿಂದುಳಿದವರು ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

ವಿಜಯಪುರದ ದಾನಮ್ಮ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಸಂಘಪರಿವಾರದ ಹುಡುಗರ ಕೈವಾಡವಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಆರೋಪಿಗಳನ್ನು ರಕ್ಷಿಸುತ್ತಿರುವುದು ಕಾಂಗ್ರೆಸ್ಸಿಗರು ಎಂದು ಡಾ. ಸಿ.ಎಸ್.ದ್ವಾರಕನಾಥ್ ಆರೋಪಿಸಿದರು.

‘ಒಬ್ಬರದ್ದು ಒಳಚಡ್ಡಿ, ಇನ್ನೂಬ್ಬರದ್ದು ಹೊರಚಡ್ಡಿ. ಇಬ್ಬರದ್ದು ಅಜೆಂಡಾ ಒಂದೇ. ಆದರೆ, ಜಂಡಾ ಮಾತ್ರ ಬೇರೆ ಬೇರೆ ಎಂದು ದ್ವಾರಕನಾಥ್ ದೂರಿದರು.

Comments are closed.