
ಬೆಂಗಳೂರು(ಡಿ.20): ರಕ್ತ ಪೂರೈಕೆ ವೇಳೆ ಮಹಿಳೆಗೆ ಹೆಚ್.ಐ.ವಿ ಸೋಂಕು ತಗುಲಿರುವ ಆರೋಪ ಹಿನ್ನೆಲೆ, ರಾಮಯ್ಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನರೇಂದ್ರನಾಥ್ ಸೇರಿದಂತೆ 14 ಜನರ ವಿರುದ್ಧ ಸದಾಶಿವನ ನಗರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಗರ್ಭಕೋಶ ಸಮಸ್ಯೆಯಿಂದ ಚಿಕಿತ್ಸೆಗೆ ದಾಖಲಾಗಿದ್ದರು ಈ ವೇಳೆ ದೇಹಕ್ಕೆ ರಕ್ತ ಪೂರೈಸಿದ ಬಳಿಕ HIV ಸೋಂಕು ತಗುಲಿದೆ ಎಂದು ಮಹಿಳೆ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ 7ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಎಫ್.ಐ.ಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು.
ಐಪಿಸಿ ಸೆಕ್ಷನ್ 120ಬಿ, 320, 324, 336 ಮತ್ತು, 338ರ ಅಡಿ ಎಫ್.ಐ.ಆರ್ ದಾಖಲಾಗಿದ್ದು, ಸದಾಶಿವನಗರ ಪೊಲೀಸರಿಂದ ಪ್ರಕರಣದ ಬಗ್ಗೆ ತನಿಖೆ ಚುರುಕುಗೊಂಡಿದೆ.
Comments are closed.