ರಾಷ್ಟ್ರೀಯ

ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹಂತಕನನ್ನು ಬಂಧಿಸಿದ ಪೊಲೀಸರು; ಬಂಧನದ ವೇಳೆ ಕತ್ತು ಸೀಳಿಕೊಂಡ ಆರೋಪಿ

Pinterest LinkedIn Tumblr

322

ಚೆನ್ನೈ : ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಚೆನ್ನೈ ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹಂತಕನನ್ನು ಬಂಧಿಸುವಲ್ಲಿ ಕೊನೆಗೂ ತಮಿಳುನಾಡು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ರಾಮ್ ಕುಮಾರ್’ನನ್ನು (22) ಶುಕ್ರವಾರ ತಡರಾತ್ರಿ ತಿರುನಲ್ವೇಲಿಯಿಂದ ಬಂಧಿಸಲಾಗಿದೆ.

ತಿರುನಲ್ವೇಲಿಯ ಮೀನಾಕ್ಷಿಪುರಮ್’ನ ರಾಮ್ ಕುಮಾರ್ ಇಂಜಿನಿಯರಿಂಗ್ ಪದವಿಧರನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆ ಆರೋಪಿ ಚಾಕುವಿನಿಂದ ತನ್ನ ಕತ್ತನ್ನು ಸೀಳಿಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆರೋಪಿಯನ್ನು ಪೊಲೀಸರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ತಿರುನಲ್ವೇಲಿಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ramkumar1

ಕಳೆದ ವಾರ ಚೆನ್ನೈನ ನುಂಗಬಕ್ಕಮ್ ರೈಲ್ವೇ ನಿಲ್ದಾಣದಲ್ಲಿ ಬೆಳಗ್ಗೆ ಕಚೇರಿಗೆ ಹೊರಟ್ಟಿದ್ದ ಸ್ವಾತಿಯನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಹಂತಕನು ಕ್ಷಣಾರ್ಧದಲ್ಲೇ ಸ್ಥಳದಿಂದ ತಪ್ಪಿಸಿಕೊಂಡಿದ್ದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು.

swathi

ಹಂತಕನ ಬೇಟೆಗಾಗಿ ಪೊಲೀಸರು 10 ವಿಶೇಷ ದಳಗಳನ್ನು ರಚಿಸಿದ್ದರು. ಕಳೆದ ಗುರುವಾರ ಹಂತಕನ ಸಿಸಿಟಿವಿ ಚಿತ್ರವನ್ನು ಬಿಡುಗಡೆ ಮಾಡಿದ್ದರು.

Comments are closed.