
ಉಳ್ಳಾಲ, ಜೂ.21 : ಮುಡಿಪುವಿನ ಟೈಲರ್ ಒಬ್ಬರನ್ನು ಅಪಹರಿಸಿ, ಕೊಲೆ ಮಾಡಲು ಯತ್ನಿಸಿದ ಪ್ರಕರಣ ಇದೀಗ ಅಚ್ಚರಿಯ ತಿರುವು ಪಡೆದುಕೊಂಡಿದೆ. ಪತ್ನಿಯೇ ಕೊಲೆ ಮಾಡಲು ಪ್ರಿಯಕರನಿಗೆ ಸುಪಾರಿ ಕೊಟ್ಟಿದ್ದಾಳೆ ಎಂದು ಆರೋಪಿಸಿ ಟೈಲರ್ ಧರಣಪ್ಪ ಪೂಜಾರಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಹಿಂದೆ ಮುಡಿಪುವಿನ ಕುಖ್ಯಾತ ರೌಡಿ ಎನ್ನಲಾದ ರಫೀಕ್ ಎಂಬಾತನ ಕೈವಾಡ ಇರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಶುಕ್ರವಾರ ರಾತ್ರಿ ಮುಡಿಪುವಿನಲ್ಲಿರುವ ಟೈಲರ್ ಅಂಗಡಿ ಮುಚ್ಚಿ ಹೊರಡುತ್ತಿದ್ದಾಗ ಬಂದ ರಫೀಕ್ ತನ್ನ ಮೂವರು ಸಹಚರರೊಂದಿಗೆ ಸೇರಿ ಸ್ಕಾರ್ಪಿಯೋ ಕಾರಲ್ಲಿ ಅಪಹರಿಸಿ ನಗ-ನಗದು ದರೋಡೆಗೈದು ಉಪ್ಪಿನಂಗಡಿ ಮಾರ್ಗವಾಗಿ ಘಾಟಿ ಪ್ರದೇಶಕ್ಕೆ ಕೊಂಡೊಯ್ದು ಕೊಲೆ ಮಾಡಲು ಯತ್ನಿಸಿದ್ದರು. ಈ ಸಂದರ್ಭ ಉಪ್ಪಿನಂಗಡಿಯಲ್ಲಿ ಪೊಲೀಸರನ್ನು ಕಂಡು ಹೆದರಿದ ತಂಡ ಧರಣಪ್ಪ ಅವರನ್ನು ಹಲ್ಲೆಗೈದು ಅರ್ಧ ದಾರಿಯಲ್ಲೇ ಬಿಟ್ಟು ಪರಾರಿಯಾಗಿತ್ತು.
ಆರಂಭದಲ್ಲಿ ಧರಣಪ್ಪ ಅವರಿಗೆ ಮುಡಿಪು ಜಂಕ್ಷನ್ನಲ್ಲಿ ಟೈಲರ್ ಅಂಗಡಿಯೊಂದಿದ್ದು, ಇಲ್ಲಿಗೆ ಬರುವ ಯುವತಿ, ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಇರಿಸಿರುವ ಆರೋಪದ ಹಿನ್ನೆಲೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಹಫೀಝ್ ಎಂಬಾತ ಧರಣಪ್ಪ ಅವರನ್ನು ಕೊಲೆ ಮಾಡಲು ಸ್ಥಳೀಯ ರಫೀಕ್ ಎಂಬಾತನಿಗೆ ಸುಪಾರಿ ನೀಡಿದ್ದ ಎಂದು ಹೇಳಲಾಗಿತ್ತು.

ಪತ್ನಿ ಹಾಗೂ ವಿದೇಶದಲ್ಲಿರುವ ಹಫೀಸ್ ನಡುವೆ ಈ ಮೊದಲೇ ಅಕ್ರಮ ಸಂಬಂಧವಿತ್ತು. ಪತ್ನಿ, ಹಫೀಸ್ ಹಾಗೂ ರಫೀಕ್ ಸೇರಿ ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಧರಣಪ್ಪ ಅವರು ನೀಡಿದ ದೂರಿನಂತೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ
ಮೂಲತ: ಮಾಣಿ ನಿವಾಸಿ ಧರಣಪ್ಪ ಪೂಜಾರಿ (42) ಮುಡಿಪು ಪೋಸ್ಟ್ ಆಫೀಸ್ ಸಮೀಪ ಬಾಡಿಗೆ ಮನೆ ಹೊಂದಿರುವ ಅವರು ಮುಡಿಪು ಜಂಕ್ಷನ್ನಿನಲ್ಲಿ ಡಿ.ಎಂ.ಟೈಲರ್ಸ್ ಎಂಬ ಟೈಲರ್ ಅಂಗಡಿಯನ್ನು ಹೊಂದಿದ್ದಾರೆ.
ಶುಕ್ರವಾರ ತಡರಾತ್ರಿ 9.30 ಸುಮಾರಿಗೆ ಅಂಗಡಿಯನ್ನು ಮುಚ್ಚಿ ಹೋಗುವ ಸಂದರ್ಭ , ಆಗಂತುಕನೋರ್ವ ಗ್ರಾಹಕನ ಸೋಗಿನಲ್ಲಿ ಬಂದು ಪ್ಯಾಂಟ್ ಹೊಲಿಯಲಿದೆ ಎಂದು ತಿಳಿಸಿದ್ದಾನೆ. ಅದರಂತೆ ಅಂಗಡಿ ಮುಚ್ಚಿದ್ದರಿಂದಾಗಿ ಆತನಿದ್ದ ಸ್ಕಾರ್ಪಿಯೋ ಬಳಿ ತೆರಳುತ್ತಿದ್ದಂತೆ ಸ್ಕಾರ್ಪಿಯೋ ವಾಹನದಲ್ಲಿದ್ದ ನಾಲ್ವರು ಸೇರಿಕೊಂಡು ವಾಹನದೊಳಕ್ಕೆ ಧರಣಪ್ಪ ಅವರನ್ನು ಹಾಕಿ ಅಪಹರಿಸಿದ್ದಾರೆ. ಈ ಕುರಿತು ಕೊಣಾಜೆ ಠಾಣೆಯಲ್ಲಿ ಅವರ ಪತ್ನಿ ಜಯಲಕ್ಷ್ಮೀ ಎಂಬವರು ಅಪಹರಣ ಪ್ರಕರಣ ಶುಕ್ರವಾರ ತಡರಾತ್ರಿ ದಾಖಲಿಸಿದ್ದರು.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ ದಾಖಲಾದ ಧರಣಪ್ಪ ಅವರ ಹೇಳಿಕೆಯಂತೆ ಮುಡಪುವಿನಿಂದ ಸ್ಕಾರ್ಪಿಯೋ ವಾಹನದಲ್ಲಿ ಅಪಹರಣಗೈದ ತಂಡ ಮೊದಲಿಗೆ ಕೇರಳ ಕಡೆಗೆ ಕೊಂಡೊಯ್ದಿತ್ತು. ಅಲ್ಲಿಂದ ಮರಳಿ ಮಂಗಳೂರು ಕಡೆಗೆ ಕೊಂಡೊಯ್ದಿದ್ದರು. ಬಳಿಕ ಉಪ್ಪಿನಂಗಡಿ ಕಡೆಗೆ ಕೊಂಡೊಯ್ಯುವ ಸಂದರ್ಭ ಸೇತುವೆಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿರುವುದನ್ನು ಕಂಡು ಅಲ್ಲಿಂದ ಹಿಂದಕ್ಕೆ ತೆರಳಿ ಹಲ್ಲೆಗೈದು ಕೈಯಲ್ಲಿದ್ದ ರೂ.10,000 ನಗದು ಹಾಗೂ ನಾಲ್ಕು ಪವನ್ ತೂಕದ ಚಿನ್ನದ ಸರವರನ್ನು ಕಳವುಗೈದು, ವಾಹನದಿಂದ ಹೊರದೂಡಿ ಪರಾರಿಯಾಗಿದ್ದಾರೆ.
ಗಾಯಗೊಂಡು ರಾತ್ರಿಯಿಡೀ ಸ್ಥಳ ಯಾವುದೆಂದು ತಿಳಿಯದೆ ಬಸ್ ನಿಲ್ದಾಣದಲ್ಲಿ ಮಲಗಿ ಬಳಿಕ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಶನಿವಾರ ಬೆಳಿಗ್ಗೆ ರಿಕ್ಷಾ ಮೂಲಕ ತೆರಳಿ ಒಳರೋಗಿಯಾಗಿ ದಾಖಲಾಗಿದ್ದಾರೆ.
Comments are closed.