ರಾಷ್ಟ್ರೀಯ

ಡಿಡಿಸಿಎ ಹಗರಣ: ಕೀರ್ತಿ ಆಜಾದ್‌ ಹೀರೋ, ಜೇಟ್ಲಿ ಆಡ್ವಾಣಿ ಮಾದರಿ ಅನುಸರಿಸಲಿ; ಶತ್ರುಘ್ನ ಸಿನ್ಹಾ

Pinterest LinkedIn Tumblr

sinhaನವದೆಹಲಿ: ಬಾಲಿವುಡ್‌ ಹಿರಿಯ ನಟ ಹಾಗೂ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಡಿಡಿಸಿಎ ಹಗರಣ ಸಂಬಂಧ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ವಿರುದ್ಧವೇ ಆರೋಪ ಮಾಡಿದ್ದ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಕೀರ್ತಿ ಆಜಾದ್‌ ಅವರನ್ನು ಹೀರೋ ಎಂದು ಹೊಗಳಿದ್ದಾರೆ. ಅಲ್ಲದೆ ಇತರ ಪಕ್ಷಗಳಿಗಿಂತ ಭಿನ್ನವಾಗಿದ್ದ ಪಕ್ಷವೊಂದು (ಬಿಜೆಪಿ) ಈಗ ಭಿನ್ನಾಭಿಪ್ರಾಯಗಳ ಪಕ್ಷವಾಗಿದೆ ಎಂದು ಬುಧವಾರ ಲೇವಡಿ ಮಾಡಿದ್ದಾರೆ.

ತೀವ್ರ ಚರ್ಚೆಗೆ ಕಾರಣವಾಗಿರುವ ಡಿಡಿಸಿಎ ಭ್ರಷ್ಟಾಚಾರ ಆರೋಪವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರಾಜಕೀಯವಾಗಿ ಎದುರಿಸಬೇಕೇ ಹೊರತು ಕಾನೂನು ಪ್ರಕಾರ ಅಲ್ಲ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಅರುಣ್ ಜೇಟ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಿವಿಮಾತನ್ನು ಸರಿಯಾಗಿ ಕೇಳಿಸಿಕೊಂಡು ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಆಡ್ವಾಣಿ ಅವರ ಉದಾಹರಣೆಯನ್ನು ಅನುಸರಿಸಿ, ಶುದ್ಧ ಹಸ್ತರಾಗಿ ಮತ್ತೆ ಅಧಿಕಾರಕ್ಕೆ ಮರಳಬೇಕು ಎಂದು ಸಿನ್ಹಾ ಸಲಹೆ ನೀಡಿದ್ದಾರೆ.

ಆಡ್ವಾಣಿ ಅವರು ತಮ್ಮ ವಿರುದ್ಧದ ಹವಾಲಾ ಆರೋಪಗಳನ್ನು ಮಾಡಲಾದಾಗ 1996ರಲ್ಲಿ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಕೊನೆಗೆ ವಿಚಾರಣೆಯಲ್ಲಿ ಸಾಕ್ಷ್ಯಗಳ ಕೊರತೆಯಿಂದಾಗಿ ಕೇಸು ಬಿದ್ಧು ಹೋಗಿತ್ತು.

Write A Comment