ಚೆನ್ನೈ, ನ06: ಮಂಗಳಮುಖಿ ಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಮತ್ತು ಕಾನೂನು ರಕ್ಷಣೆ ನೀಡಲು ಮಂಗಳಮುಖಿಯರ ಪೊಲೀಸ್ ತಂಡವನ್ನು ರಚಿಸುವಂತೆ ತಮಿಳು ನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ.
ಭಾರತದ ಮೊದಲ ಮಂಗಳಮುಖಿ ಸಬ್ ಇನ್ಸ್ಪೆಕ್ಟರ್ ಪ್ರಿಯಾಂಕಾ ಸಹಿಶ್ರೀ ಅವರನ್ನು ನೇಮಕ ಮಾಡಿಕೊಳ್ಳಬೇಕು. ಅವರನ್ನು ಮಂಗಳಮುಖಿ ಎಂದು ಇಲಾಖೆಯಿಂದ ವಜಾ ಮಾಡಿರುವುದು ಸರಿಯಲ್ಲ. ಈಗಾಗಲೇ ಪೊಲೀಸ್ ತರಬೇತಿ ಮತ್ತು ಪರೀಕ್ಷೆಯಲ್ಲಿ ಉತ್ತಮವಾಗಿ ಅಂಕಗಳಿಸಿ ಆಕೆ ಎಸ್ಐ ಆಯ್ಕೆಯಾದರೂ ತಾರತಮ್ಯ ಮಾಡಿ ಸೇವೆಯಿಂದ ತೆಗೆದುಹಾಕಿರುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
