ರಾಷ್ಟ್ರೀಯ

ಪಾಕ್‌ ದೋಣಿಯಲ್ಲಿದ್ದವರು ಶಂಕಿತ ಉಗ್ರರು: ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಹೇಳಿಕೆ

Pinterest LinkedIn Tumblr

Parikkar

ನವದೆಹಲಿ:  ಇತ್ತೀ­ಚೆಗೆ ಅರಬ್ಬಿ ಸಮುದ್ರದಲ್ಲಿ ಕರಾವಳಿ ಕಾವಲು ಪಡೆ ಕಣ್ಣಿಗೆ ಬಿದ್ದು ನಂತರದಲ್ಲಿ ಸ್ಫೋಟಿಸಿಕೊಂಡ ಪಾಕಿಸ್ತಾ­ನದ ದೋಣಿಯಲ್ಲಿ ಇದ್ದ­ವರು ಶಂಕಿತ ಉಗ್ರರು ಎನ್ನು­ವುದನ್ನು ‘ಸಾಂದರ್ಭಿಕ ಸಾಕ್ಷ್ಯಗಳು’ ದೃಢಪಡಿಸುತ್ತವೆ ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಹೇಳಿದರು.

ದೋಣಿಯಲ್ಲಿದ್ದ ನಾಲ್ವರು ಪಾಕಿ­ಸ್ತಾನದ ಕರಾವಳಿ ಕಾವಲು ಪಡೆ ಹಾಗೂ ಸೇನಾ ಅಧಿಕಾರಿ­ಗಳ ಸಂಪರ್ಕ­ದಲ್ಲಿದ್ದರು ಎಂದೂ ಅವರು ಸೋಮ­ವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು. ದೋಣಿಯಲ್ಲಿದ್ದವರು ಕಳ್ಳಸಾಗಣೆ­ಗಾ­ರರು ಎನ್ನುವ ವರದಿಗಳನ್ನು ಅವರು ಅಲ್ಲಗಳೆದರು.

ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿವರಗ­ಳನ್ನು ಸದ್ಯದಲ್ಲಿಯೇ ಬಹಿರಂಗಪಡಿಸಲಾಗುತ್ತದೆ ಎಂದೂ ಪರಿಕ್ಕರ್‌ ಹೇಳಿದರು.
ಈ ನಾಲ್ವರು ದೋಣಿಗೆ ಬೆಂಕಿ ಹಚ್ಚಿ ಸಜೀವ ದಹನಗೊಂಡಿದ್ದನ್ನು ನೋಡಿದರೆ ಇವರು ಉಗ್ರರು ಎನ್ನುವ ಅನುಮಾನ ಹೆಚ್ಚುತ್ತದೆ ಎಂದರು. ಯಾವ ಆಧಾರದಲ್ಲಿ ಈ ಊಹೆಗೆ ಬಂದಿರಿ ಎಂದು ಸುದ್ದಿ­ಗಾ­ರರು ಕೇಳಿದ ಪ್ರಶ್ನೆಗೆ, ‘ಸಾಂದ­ರ್ಭಿಕ ಸಾಕ್ಷ್ಯವನ್ನು ನೋಡಿದರೆ ಈ ಅನುಮಾನ ಬರುತ್ತದೆ’ ಎಂದರು.

ಪರಿಕ್ಕರ್‌ ಹೇಳಿದ್ದು
1)ದೋಣಿಯು ಮೀನುಗಾರಿಕೆ ಪ್ರದೇಶದಲ್ಲಿ ಅಥವಾ ಕಳ್ಳಸಾಗಣೆಗಾರರು ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳುವ ದಟ್ಟಣೆಯ ಮಾರ್ಗದಲ್ಲಿ ಹೋಗುತ್ತಿರಲಿಲ್ಲ. ಯಾವ ಉದ್ದೇಶದಿಂದ ಅದು ಇಲ್ಲಿಗೆ ಬಂದಿತ್ತು ಎನ್ನುವುದು ಸ್ಪಷ್ಟವಾಗಿಲ್ಲ.

2)ದೋಣಿಯಲ್ಲಿದ್ದವರು ಅದರಲ್ಲಿದ್ದ ಸರಕನ್ನು ಸಾಗಿಸುವ ಬಗ್ಗೆ ಚರ್ಚಿ­ಸುತ್ತಿದ್ದರು. ಅಲ್ಲದೇ ತಮ್ಮಲ್ಲಿ ಕೆಲವರ ಕುಟುಂಬದ ಬಗ್ಗೆಯೂ ಮಾತ­ನಾಡಿಕೊ­ಳ್ಳುತ್ತಿದ್ದರು ಎನ್ನುವುದು  ಉಪಗ್ರಹ ಸಂವಹನವನ್ನು ಭೇದಿಸಿದಾಗ ತಿಳಿದುಬಂದಿದೆ.

3)ಕಳ್ಳಸಾಗಣೆಗಾರರು ಪಾಕ್‌ ಕರಾವಳಿ ಕಾವಲು ಪಡೆ, ಅಲ್ಲಿನ ಸರ್ಕಾರ ಅಥವಾ ಅಂತರ­ರಾಷ್ಟ್ರೀಯ ಮಟ್ಟದ ಸಂಪರ್ಕ ಇಟ್ಟು­ಕೊಳ್ಳುವುದಿಲ್ಲ. ದೋಣಿಯು ಕಳ್ಳ­ಸಾಗಣೆ ಮಾಡುತ್ತಿ­ದ್ದುದೇ ಆಗಿದ್ದಲ್ಲಿ ಅದರಲ್ಲಿ­ದ್ದವರು ಸರಕನ್ನು ನೀರಿಗೆ ಎಸೆದು  ಶರಣಾ­ಗುತ್ತಿದ್ದರು.

ರಾಹುಲ್‌ ಪ್ರತಿಕ್ರಿಯೆಗೆ ಬಿಜೆಪಿ ಆಗ್ರಹ: ಪಾಕ್‌ ದೋಣಿ ವಿಷಯದಲ್ಲಿ ಭದ್ರತಾ ಪಡೆಗಳ ಕಾರ್ಯಾ­ಚರಣೆ ಬಗ್ಗೆ ಅನುಮಾನ ವ್ಯಕ್ತಪಡಿ­ಸುತ್ತಿ­ರುವ ಕಾಂಗ್ರೆಸ್‌ ಪಕ್ಷ ಕೊಳಕು ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಈ ವಿಷಯದಲ್ಲಿ ತಮ್ಮ ಪಕ್ಷದ ಮುಖಂಡರನ್ನು ಬೆಂಬಲಿಸುವರೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಅದು ಆಗ್ರಹಿಸಿದೆ.

‘ಕಾಂಗ್ರೆಸ್‌ ಮುಖಂಡರು ಪಾಕಿ­ಸ್ತಾನದವರಂತೆ ಮಾತನಾಡುತ್ತಿದ್ದಾರೆ. ಪಾಕ್‌ ದೋಣಿಯನ್ನು ತಡೆದು ಸಂಭಾವ್ಯ ದಾಳಿ ತಪ್ಪಿಸಿದ್ದಕ್ಕೆ ಇಡೀ ದೇಶ ಭದ್ರತಾ ಪಡೆಯನ್ನು ಶ್ಲಾಘಿಸುತ್ತಿದೆ. ಆದರೆ ಕಾಂಗ್ರೆಸ್‌ ಮಾತ್ರ ಈ ಬಗ್ಗೆ ಅನುಮಾನ ಹೊಂದಿದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್‌ ಶರ್ಮ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಾಕ್‌ ಸ್ಪಷ್ಟನೆ ಕೊಳಕು ರಾಜ­ಕೀಯ
ದೋಣಿ ಸ್ಫೋಟ ಘಟನೆಗೆ ಸಂಬಂಧಿಸಿ­ದಂತೆ ಭಾರತದ ಆರೋಪ ‘ಅತ್ಯಂತ ಕ್ಷುಲ್ಲಕ’ ಎಂದು ಪಾಕಿಸ್ತಾನ ತಿರುಗೇಟು ನೀಡಿದೆ. ನಮ್ಮ ಯಾವ ದೋಣಿಯೂ ಭಾರತದತ್ತ ತೆರಳಿಲ್ಲ.  ಈ ಬಗ್ಗೆ ನಾವು ಸಮಗ್ರವಾಗಿ ಪರಿಶೀ­ಲಿ­ಸಿ­ದ್ದೇವೆ ಎಂದು ಅದು ಸ್ಪಷ್ಟಪಡಿಸಿದೆ.

……………………..

‘ದೋಣಿ ಬೆಂಕಿ ಹೊತ್ತಿ­ ಉರಿದಿ­ದೆಯೇ ಹೊರತು ಸ್ಫೋಟಿಸಿಲ್ಲ. ಈ ಬಗ್ಗೆ ವ್ಯತಿರಿಕ್ತ ಹೇಳಿಕೆಗಳಿವೆ’ ಎಂದು ಪಾಕ್‌ ಹೇಳಿದೆ.     ಉಗ್ರರ ವಿಷಯದಲ್ಲಿ ಕೊಳಕು ರಾಜ­ಕೀಯ ಮಾಡಿದ್ದಕ್ಕಾಗಿ ಕಾಂಗ್ರೆಸ್‌ ಪಕ್ಷಕ್ಕೆ  ಲೋಕ­ಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ನಾಯಕತ್ವದ ಬಿಕ್ಕಟ್ಟು ಎದುರಿ­ಸುತ್ತಿರುವ ಅದು ಉಗ್ರ ಹಫೀಜ್‌ ಸಯೀದ್‌ ಮುಂದಾಳತ್ವದಲ್ಲಿ ಪಾಕಿಸ್ತಾನ­ದಲ್ಲಿ ಚುನಾವ­ಣೆಗೆ ನಿಲ್ಲಲು ತಯಾರಿ ನಡೆಸುತ್ತಿದೆಯೇ?
–ಶ್ರೀಕಾಂತ್‌ ಶರ್ಮ
ಬಿಜೆಪಿ ಪ್ರಧಾನ ಕಾರ್ಯದರ್ಶಿ

Write A Comment