ಕರಾವಳಿ

ಬೈಂದೂರು: ಸೋಮೇಶ್ವರ ಬೀಚ್’ನಲ್ಲಿ 23 ವರ್ಷದ ಯುವಕ ನೀರು ಪಾಲು

Pinterest LinkedIn Tumblr

ಕುಂದಾಪುರ: ಸ್ನೇಹಿತರ ಜೊತೆ ಸಮುದ್ರಕ್ಕೆ ಗಾಳಕ್ಕಾಗಿ ತೆರಳಿದ ವೇಳೆ 23 ವರ್ಷ ಪ್ರಾಯದ ಯುವಕ ನೀರುಪಾಲಾದ ಘಟನೆ ಬೈಂದೂರು ತಾಲೂಕಿನ ಸೋಮೇಶ್ವರ ಬಳಿ ಭಾನುವಾರ ಸಂಜೆ ನಡೆದಿದೆ.

ಬೈಂದೂರು ಬಿಜೂರು ಸಮೀಪದ ಬವಳಾಡಿ ನಿವಾಸಿ ಶಶಿಧರ್ ದೇವಾಡಿಗ (23) ಮೃತ ದುರ್ದೈವಿ.

ಭಾನುವಾರ ಸಂಜೆ ವೇಳೆ ಈ ಘಟನೆ ನಡೆದಿದೆ. ನೀರು ಪಾಲಾದ ಯುವಕರ ರಕ್ಷಣೆಗೆ ಮೀನುಗಾರರು ಮುಂದಾದರೂ ಕೂಡ ಶಶಿಧರ್ ಅವರನ್ನು ಬಚಾವ್ ಮಾಡಲು ಸಾಧ್ಯವಾಗಿಲ್ಲ. ಬಡತನದ ಕುಟುಂಬದವರಾದ ಶಶಿಧರ್ ಕಳೆದುಕೊಂಡ ಮನೆಯವರ ಆಕ್ರಂಧನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ಹಾಗೂ ಠಾಣೆಯವರು ಭೇಟಿ ನೀಡಿದ್ದಾರೆ.

 

Comments are closed.