ಉಡುಪಿ: ಜಿಲ್ಲೆಯ ಕಾಪು, ಕಟಪಾಡಿ, ಪಡುಬಿದ್ರಿ, ಶಿರ್ವ, ಕಾರ್ಕಳ, ಬೆಳ್ಮಣ್ ಮುಂತಾದ ಕಡೆಗಳಲ್ಲಿ ನಿಲ್ಲಿಸಿದ್ದ ಲಾರಿ-ಟೆಂಪೋ ಮೊದಲಾದ ವಾಹನಗಳ ಬ್ಯಾಟರಿ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಮ್ಮದ್ ಶರೀಫ್ ಕಾಪು , ಅಲ್ತಾಫ್ ಚಂದ್ರ ನಗರ ,ಅಬ್ದುಲ್ ರೆಹಮಾನ್ ಮೂಳೂರು, ಫರ್ಜೀನ್ ಅಹಮ್ಮದ್ ಮೂಳೂರು, ಅಫ್ಜಲ್ ರೆಹಮಾನ್ ಮೂಳೂರು, ಮಹಮ್ಮದ್ ಇಜಾಜ್ ಮೂಳೂರು ಬಂಧಿತ ಆರೋಪಿಗಳು.
ಆರೋಪಿಗಳು ಕಾಪು, ಕಟಪಾಡಿ, ಪಡುಬಿದ್ರಿ, ಶಿರ್ವ, ಕಾರ್ಕಳ, ಬೆಳ್ಮಣ್ ಮುಂತಾದ ಕಡೆಗಳಲ್ಲಿ ನಿಲ್ಲಿಸಿದ್ದ ಲಾರಿ-ಟೆಂಪೋ ವಾಹನದಿಂದ ಬ್ಯಾಟರಿ ಕಳವು ಮಾಡಿ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ 22 ಬ್ಯಾಟರಿ, ಮೂರು ಕಾರು ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ವಿಷ್ಣುವರ್ಧನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ನಿರ್ದೇಶನದಲ್ಲಿ ಕಾರ್ಕಳ ಪೊಲೀಸ್ ಉಪಾಧೀಕ್ಷಕ ವಿಜಯಪ್ರಸಾದ್ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕರಾದ ಪ್ರಕಾಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಪಿಎಸ್ಐ ತಿಮ್ಮೇಶ್ ಬಿ ಎನ್, ರಾಘವೇಂದ್ರ, ಶಿರ್ವ ಪಿಎಸೈ ಶ್ರೀಶೈಲ ಆರ್ ಅಪರಾಧ ಪತ್ತೆ ತಂಡದ ಪ್ರವೀಣ್ ಕುಮಾರ್, ನಾರಾಯಣ, ರಾಜೇಶ್, ಹೇಮರಾಜ್, ಸಂದೇಶ, ಆನಂದ, ರಘು, ಸಂತೋಷ್, ಶಿವಾನಂದ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Comments are closed.